Swavalambi Sarathi scheme ಸ್ವಾವಲಂಬಿ ಸಾರಥಿ ಯೋಜನೆ.

Swavalambi Sarathi scheme

Swavalambi Sarathi scheme ಸ್ವಾವಲಂಬಿ ಸಾರಥಿ ಯೋಜನೆ ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಕರಿಗೆ ವಾಹನ ಖರೀದಿಸಲು ಸಹಾಯಧನ ನೀಡುವ ಯೋಜನೆಯಾಗಿದೆ.

ಸರ್ಕಾರದ ಸಾಮಾಜಿಕ ಕಲ್ಯಾಣ ಕಾರ್ಯ ಕ್ರಮಗಳಲ್ಲಿ ಹಲವು ಯೋಜನೆಗಳನ್ನು ನೋಡಬಹುದು. ಎಲ್ಲಾ ವರ್ಗದ ಜನರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ರೀತಿಯ ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ. ಸ್ವಾವಲಂಬಿ ಸಾರಥಿ ಯೋಜನೆಯನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲ್ಲಿ ನಿರುದ್ಯೋಗಿ ಯುವಕರಿಗೆ ವಾಹನ ಖರೀದಿ ಮಾಡಲು ಮೂರು ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತದೆ. Swavalambi ಸಾರಥಿ ಯೋಜನೆಯಿಂದ ಸಹಾಯಧನ ಪಡೆಯಲು ಅರ್ಜಿ ಕರೆಯಲಾಗಿದೆ. 2025-26ನೇ ಸಾಲಿನಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಈ ಲೇಖನದಲ್ಲಿ ನಾವು ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಹೇಗೆ, ಏಲ್ಲಿ, ಬೇಕಾಗುವ ಪ್ರಮುಖ ದಾಖಲೆಗಳು ಯಾವುವು ಮತ್ತು ವಯೋಮಿತಿ ಹಾಗೂ ಇರಬೇಕಾದ ಅರ್ಹತಾ ಮಾನದಂಡಗಳ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಲೇಖನವನ್ನು ಪೂರ್ತಿಯಾಗಿ ಓದಿಕೊಂಡು ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿ.

Swavalambi Sarathi scheme ಸ್ವಾವಲಂಬಿ ಸಾರಥಿ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

Swavalambi Sarathi scheme
Swavalambi Sarathi scheme

Swavalambi Sarathi scheme ಸ್ವಾವಲಂಬಿ ಸಾರಥಿ ಯೋಜನೆಯಿಂದ ಸಾಲ ಸೌಲಭ್ಯ ಪಡೆದುಕೊಂಡು ಸ್ವಾವಲಂಬನೆಯಿಂದ ಬದುಕು ಕಟ್ಟಿಕೊಳ್ಳಲು ಬಯಸುವ ಯುವಕರು ಈ ಯೋಜನೆಯ ಉಪಯೋಗ ಪಡೆದುಕೊಳ್ಳಬಹುದು. ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಬೇಕಾಗುವ ಎಲ್ಲಾ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

  • ಯೋಜನೆ ಹೆಸರು : ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi scheme).
  • ಇಲಾಖೆ ಹೆಸರು : ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ.
  • ವರ್ಷ : 2025-26.
  • ಅರ್ಜಿ ಸಲ್ಲಿಕೆ ವಿಧಾನ :ಆನ್ಲೈನ್(Online).
  • ವಯೋಮಿತಿ : ಕನಿಷ್ಠ 21 ವರ್ಷದಿಂದ ಗರಿಷ್ಠ 45 ವರ್ಷಗಳು.
  • ಯೋಜನೆ ಉದ್ದೇಶ : ನಿರುದ್ಯೋಗ ನಿವಾರಣೆ.
  • ಸಾಲ ಸೌಲಭ್ಯ : 3 ಲಕ್ಷ.
  • ಆದಾಯ ಮಿತಿ : ಗ್ರಾಮೀಣ ಪ್ರದೇಶದವರಿಗೆ ರೂ.98,000.
  • ನಗರ ಪ್ರದೇಶದವರಿಗೆ ರೂ.1,20,000.
  • ಪರವಾನಿಗೆ : ಲಘು ವಾಹನ ಪರವಾನಿಗೆ ಹೊಂದಿರಬೇಕು.
  • ಬೇಕಾದ ದಾಖಲೆಗಳು : ಆಧಾರ್ ಕಾರ್ಡ್(Aadhar card).
  • ವಾಹನ ಪರವಾನಿಗೆ ಪತ್ರ.
  • ಜಾತಿ ಪ್ರಮಾಣ ಪತ್ರ.
  • ಆದಾಯ ದೃಡೀಕರಣ ಪತ್ರ.
  • ಸ್ವಯಂ ಘೋಷಣೆ ಪತ್ರ.
  • ಬ್ಯಾಂಕ್ ಖಾತೆಯ ವಿವರ.
  • ವಾಹನದ ಅಂದಾಜು ಕೋಟೇಷನ್ ಪ್ರತಿ.

ನಿರುದ್ಯೋಗ ನಿವಾರಣೆ ಮಾಡುವ ದೃಷ್ಟಿಯಲ್ಲಿ ಸರ್ಕಾರ ಸ್ವಾವಲಂಬಿ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಸದುಪಯೋಗ ಪಡೆದುಕೊಂಡು ಯುವಕರು ದುಡಿಮೆ ಪ್ರಾರಂಭಿಸಬಹುದು. ತಮ್ಮ ಜೀವನ ಕಟ್ಟಿಕೊಳ್ಳಲು, ಉತ್ತಮ ರೀತಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಹಿಂದುಳಿದ ವರ್ಗದ ಯುವಕರ ಅಭಿವೃದ್ಧಿಗೆ ಸರ್ಕಾರ ಕೊಡುಗೆ ನೀಡಿದೆ.

Important Massages : ಪ್ರತಿ ದಿನದ ಟ್ರೆಂಡಿಂಗ್ ನ್ಯೂಸ್, ಹೊಸ ಉದ್ಯೋಗ ಮಾಹಿತಿಯನ್ನು ಮತ್ತು ಸರ್ಕಾರಿ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಿರಿ.

ನಮ್ಮ ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

Swavalambi Sarathi scheme ಸ್ವಾವಲಂಬಿ ಸಾರಥಿ ಯೋಜನೆಗೆ ಬೇಕಾದ ಪ್ರಮುಖ ದಾಖಲೆಗಳು.

Swavalambi Sarathi scheme

ಸ್ವಾವಲಂಬಿ ಸಾರಥಿ ಯೋಜನೆಯನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಡಿಯಲ್ಲಿ ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲ್ಲಿ ನಿರುದ್ಯೋಗಿ ಯುವಕರಿಗೆ ವಾಹನ ಖರೀದಿ ಮಾಡಲು ಮೂರು ಲಕ್ಷ ರೂಪಾಯಿ ಸಹಾಯಧನ ನೀಡಲಾಗುತ್ತದೆ. Swavalambi ಸಾರಥಿ ಯೋಜನೆಯಿಂದ ಸಹಾಯಧನ ಪಡೆಯಲು ಬೇಕಾಗುವ ಪ್ರಮುಖ ದಾಖಲೆಗಳ ಬಗ್ಗೆ ತಿಳಿದುಕೊಳ್ಳೋಣ.

  1. ಆಧಾರ್ ಕಾರ್ಡ್(Aadhar card).
  2. ಚುನಾವಣಾ ಗುರುತಿನ ಚೀಟಿ (Election Identity Card).
  3. ಪಡಿತರ ಚೀಟಿ (Ration Card).
  4. ವಾಹನ ಪರವಾನಿಗೆ ಪತ್ರ(Driving license).
  5. ಜಾತಿ ಪ್ರಮಾಣ ಪತ್ರ (Caste Certificate).
  6. ಆದಾಯ ದೃಡೀಕರಣ ಪತ್ರ(Income Certificate).
  7. ಸ್ವಯಂ ಘೋಷಣೆ ಪತ್ರ(Self Declaration).
  8. ಬ್ಯಾಂಕ್ ಖಾತೆಯ ವಿವರ(Bank Account Details).
  9. ವಾಹನದ ಅಂದಾಜು ಕೋಟೇಷನ್ ಪ್ರತಿ( Vehicle Quatation).

ಇವೆಲ್ಲಾ ಪ್ರಮುಖ ದಾಖಲೆಗಳು ಕಡ್ಡಾಯವಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. ಈ ನಿಗಮದ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.

Swavalambi Sarathi scheme ಸ್ವಾವಲಂಬಿ ಸಾರಥಿ ಯೋಜನೆಗೆ ಬೇಕಾದ ಅರ್ಹತಾ ಮಾನದಂಡಗಳು.

Swavalambi Sarathi scheme

ನಿರುದ್ಯೋಗಿ ಯುವಕರಿಗೆ ವಾಹನ ಖರೀದಿ ಮಾಡಲು ಮೂರು ಲಕ್ಷ ರೂಪಾಯಿ ಸಹಾಯಧನ ನೀಡುವ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗು ಕೆಲವು ಅರ್ಹತಾ ಮಾನದಂಡಗಳ ಬಗ್ಗೆ ತಿಳಿದಿಕೊಳ್ಳೋಣ.

  • ವಯೋಮಿತಿ ವಿವರ (Age Qualification) :

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸಿ, ಸಹಾಯಧನ ಪಡೆಯಲು ಕೆಲವು ನಿಯಮಗಳಿವೆ. ವಾಹನ ಖರೀದಿ ಮಾಡಲು ಬಯಸುವ ವ್ಯಕ್ತಿಯ ಕೆಳಗಿನ ವಯೋಮಿತಿ ದಾಟಿರಬಾರದು.

  1. ಕನಿಷ್ಠ ವಯಸ್ಸು 21 ವರ್ಷ ಆಗಿರಬೇಕು.
  2. ಗರಿಷ್ಠ ವಯಸ್ಸು 45 ವರ್ಷ ದಾಟಿರಬಾರದು.
  • ಆದಾಯ ಮಿತಿ(Income Limit) :

Swavalambi Sarathi scheme ಸ್ವಾವಲಂಬಿ ಸಾರಥಿ ಯೋಜನೆಯಿಂದ ಸಾಲ ಸೌಲಭ್ಯ ಪಡೆದುಕೊಂಡು ಸ್ವಾವಲಂಬನೆಯಿಂದ ಬದುಕು ಕಟ್ಟಿಕೊಳ್ಳಲು ಬಯಸುವ ಯುವಕರ ಕುಟುಂಬದ ಆದಾಯ ಕೆಳಗೆ ನೀಡಿರುವ ಮಿತಿಯನ್ನು ಮೀರಿರಬಾರದು.

  • ಗ್ರಾಮೀಣ ಪ್ರದೇಶದವರಿಗೆ ಆದಾಯ ಮಿತಿ :

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರು ಈ ಯೋಜನೆಯಿಂದ ಸಾಲ ಸೌಲಭ್ಯ ಪಡೆಯಲು ಅವರ ಕುಟುಂಬದ ಆದಾಯ ಮಿತಿ ರೂ.98,000 ದ ಒಳಗೆ ಇರಬೇಕು. ಎಲ್ಲಾ ಮೂಲಗಳಿಂದ ಒಟ್ಟು ಆದಾಯ ತೊಂಬಟೆಂತು ಸಾವಿರದ ಮಿತಿಯನ್ನು ದಾಟಿರಬಾರದು.

  • ನಗರ ಪ್ರದೇಶದವರಿಗೆ ಆದಾಯ ಮಿತಿ :

ನಗರ ಪ್ರದೇಶದಲ್ಲಿ ವಾಸಿಸುವ ಜನರ ಆದಾಯ ಮಿತಿ ರೂ.1,20,000 ದ ಒಳಗೆ ಇರಬೇಕು. ಎಲ್ಲಾ ಮೂಲಗಳಿಂದ ಈ ಮಿತಿಯನ್ನು ಮೀರಿರಬಾರದು.

Swavalambi Sarathi scheme ಸ್ವಾವಲಂಬಿ ಸಾರಥಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ.

Swavalambi Sarathi scheme

ಸ್ವಾವಲಂಬಿ ಸಾರಥಿ ಯೋಜನೆಯಿಂದ ವಾಹನ ಖರೀದಿ ಮಾಡಲು ಸಾಲ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ. ಸೇವಾಸಿಂಧು ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಥವಾ ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರದ ಮೂಲಕ ಅಪ್ಲಿಕೇಶನ್ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಸೇವಾಸಿಂಧು ಸೇವಾ ಕೇಂದ್ರಕ್ಕೆ ಭೇಟಿ ನೀಡುವಾಗ ಕಡ್ಡಾಯವಾಗಿ ಸಲ್ಲಿಸಬೇಕಾದ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಹೋಗಬೇಕು. ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು. ನಿಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ, ಸೇವಾ ಸಿಬ್ಬಂದಿಗಳ ಮೂಲಕ ಅಪ್ಲಿಕೇಶನ್ ಭರ್ತಿ ಮಾಡಬೇಕು. ಒಂದು ಭಾರಿ ನಿಗಮದಿಂದ ಸೌಲಭ್ಯ ಪಡೆದವರು ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಅರ್ಜಿ ಸಲ್ಲಿಸುವ ಯುವಕರು ಬ್ಯಾಂಕ್ ಖಾತೆ ವಿವರವನ್ನು ನೀಡುವಾಗ, ಆಧಾರ್ ನಂಬರ್ ಗೆ ಲಿಂಕ್ ಆದ ಮೊಬೈಲ್ ನಂಬರ್ ಅನ್ನು ಮಾತ್ರ ನೀಡಬೇಕು. ಅಂದರೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಇದರಿಂದ ನಿಮ್ಮ ಸಂಪೂರ್ಣ ಮಾಹಿತಿಯನ್ನು ಪಡೆಯಲು ನಿಗಮಕ್ಕೆ ಸಹಾಯವಾಗುತ್ತದೆ. ನಿಮಗೂ ಸಹ ಅಪ್ಲಿಕೇಶನ್ ಹಾಕಿದ ಮಾಹಿತಿ, ಅಪ್ಲಿಕೇಶನ್ ಸ್ಟೇಟಸ್ ಮುಂತಾದ ಮಾಹಿತಿಯನ್ನು ಪಡೆಯಲು ಸಹಾಯವಾಗುತ್ತದೆ.

ವಿಶೇಷ ಸೂಚನೆ : ನಮ್ಮ “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ಸುಳ್ಳು ಮಾಹಿತಿಯನ್ನು ಪ್ರಕಟ ಮಾಡುವುದಿಲ್ಲ. ಅಧಿಕೃತ ಮತ್ತು ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟ ಮಾಡಲಾಗುವುದು. ವಂದನೆಗಳು.

 

 

 

Leave a Reply

Your email address will not be published. Required fields are marked *