Rain alert : ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಭಾರಿ ಮಳೆ ಆಗುವ ಸಾಧ್ಯತೆ. 7 ಜಿಲ್ಲೆಗಳಿಗೆ ರೆಡ್ ಅಲರ್ಟ್ ಎಚ್ಚರಿಕೆ ನೀಡಿದ ಹವಮಾನ ಇಲಾಖೆ.
ರಾಜ್ಯದಲ್ಲಿ ವಾಯುಭಾರ ಕುಸಿತದಿಂದ ಭಾರಿ ಮಳೆ ಆಗುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ 7 ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದೆ. ಅರಬ್ಬೀ ಸಮುದ್ರದಲ್ಲಿ ವಾಯುಭಾರದ ಕುಸಿತ ಕಾಣಿಸಿಕೊಂಡಿದ್ದು, ಕರಾವಳಿಯ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಒಂದು ವಾರಗಳ ಕಾಲ ಅತೀ ಹೆಚ್ಚಿನ ಮಳೆ, ಬಿರುಗಾಳಿ ಬರುವ ಸಾಧ್ಯತೆ ಜಾಸ್ತಿ ಇರುವುದರಿಂದ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ಪ್ರವೇಶಕ್ಕೆ ಮುನ್ನವೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಬರುತ್ತಿದೆ. ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಬೀಸುವ ಲಕ್ಷಣ ಕಂಡು ಬಂದಿದೆ. ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇನ್ನೂ ಒಂದು ವಾರಗಳ ಕಾಲ ಧಾರಾಕಾರ ಮಳೆ ಬರುವ ನಿರೀಕ್ಷೆ ಇದೆ. ಆದ್ದರಿಂದ ನಾಗರಿಕರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದೆ.
Rain alert : ಹವಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದ ಜಿಲ್ಲೆಗಳು.

Rain alert : ಕರ್ನಾಟಕ ರಾಜ್ಯಕ್ಕೆ ಮೇ 27 ರಿಂದ ಮುಂಗಾರು ಪ್ರವೇಶ ಆಗಲಿದೆ. ಆದರೆ ಅದಕ್ಕೆ ಮೊದಲೇ ಅತೀ ಹೆಚ್ಚು ಮಳೆಯಾಗುತ್ತಿರುವುದರಿಂದ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿಯ ಹಲವು ಕಡೆ ಬಿರುಗಾಳಿ ಸಹಿತ ಮಳೆ ಬೀಳುವ ಮುನ್ಸೂಚನೆ ಇದೆ. ಹಾಗಾಗಿ ಮೀನುಗಾರರು ತುಂಬಾ ಎಚ್ಚರಿಕೆಯಿಂದ ಇರಬೇಕು.
ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಮತ್ತು ಬಿರುಗಾಳಿ ಬಿಸುತ್ತಿರುವುದರಿಂದ ರಾಜ್ಯದಲ್ಲಿನ ಏಳು ಜಿಲ್ಲೆಗಳು ರೆಡ್ ಅಲರ್ಟ್ ಗೆ ಒಳಪಟ್ಟಿವೆ. ಮುಖ್ಯವಾಗಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಬೆಳಗಾವಿಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ರೆಡ್ ಅಲರ್ಟ್ 20 ಮೇ 2025 ರಿಂದ 23 ಮೇ 2025 ರಾ ವರೆಗೆ ಇರುತ್ತದೆ. ಪ್ರತಿಕೂಲ ಹವಮಾನದಿಂದ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ ಇದರ ಬಗ್ಗೆ ಮಾಹಿತಿ ನೀಡಿದೆ. ಈಗಾಗಲೇ ಸಮುದ್ರದಲ್ಲಿ ಇರುವ ಮೀನುಗಾರರು ಕೂಡಲೆ ತಮ್ಮ ಬಂದರುಗಳಿಗೆ ಹಿಂದಕ್ಕೆ ಬರುವಂತೆ ತಿಳಿಸಲಾಗಿದೆ.
Rain alert ನಮ್ಮ ರಾಜಧಾನಿ ಬೆಂಗಳೂರು ನಲ್ಲಿ ಬಹಳ ಮಳೆ ಆಗುತ್ತಿದ್ದೆ, ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಹಲವೆಡೆ ಆಫೀಸ್, ಕಚೇರಿ ಮತ್ತು ಮನೆ, ಅಪಾರ್ಟ್ಮೆಂಟ್ಗಳು ಜಾಲವೃತ ಆಗಿವೆ. ರಸ್ತೆ ತುಂಬೆಲ್ಲ ನೀರು ತುಂಬಿಕೊಂಡು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುತ್ತಿದೆ. ಜನರ ಪರಿಸ್ಥಿತಿ, ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗುವುದು ಸಹ ಕಷ್ಟ ಆಗಿದೆ. ಕೆಲವು ಶಾಲೆಗಳು ಬೇಸಿಗೆಯ ರಜೆ ಇರುವುದರಿಂದ ತುಂಬಾ ಅನುಕೂಲ ಆಗಿದೆ. ಮಕ್ಕಳು ಸೇಫ್ ಆಗಿ ಮನೆಯಲ್ಲಿ ಇರಲು ಸಹಾಯವಾಗಿದೆ.
ಇನ್ನೂ ಚಿಕ್ಕಮಗಳೂರು ಜಿಲ್ಲಾಡಳಿತ ನಾಗರಿಕರು ನದಿಗಳಿಗೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಭಾರೀ ಮಳೆಯಿಂದ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ಬಹಳ ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದೆ. ಅಥವಾ ಬೇರೆ ಎತ್ತರದ ಪ್ರದೇಶದ ಕಡೆ ಹೋಗಿ ವಾಸಿಸುವಂತೆ ಮನವಿ ಮಾಡಿಕೊಂಡಿದೆ. ಜಾನುವರು, ದನ ಕರು, ಕುರಿ ಮೇಕೆಗಳನ್ನು ಕಾಪಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಅದೇಶಿಸಿದ್ದಾರೆ.
ಭೂ ಕುಸಿತ ಉಂಟಾಗುವ ಸಾಧ್ಯತೆ ಇರುವುದರಿಂದ ಜನರು ಮುನ್ನೆಚ್ಚರಿಕೆ ಇಂದ ಇರುವಂತೆ ತಿಳಿಸಿದೆ. ಇನ್ನೂ ಮೂರು ದಿನಗಳ ಕಾಲ ಜವಾಬ್ದಾರಿಯಿಂದ ಕೆಲಸ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಮುನ್ನೆಚ್ಚರಿಕೆ ಬಹಳ ಮುಖ್ಯ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
Rain alert : ಯಾವ ಜಿಲ್ಲೆಗಳು ಅರೇಂಜ್ ಮತ್ತು ಎಲ್ಲೊ ಅಲರ್ಟ್ ನಲ್ಲಿವೆ ಎಂಬುದನ್ನು ನೋಡೋಣ.
Rain alert : ಅರೇಂಜ್ ಅಲರ್ಟ್ ನಲ್ಲಿ ಇರುವ ಜಿಲ್ಲೆಗಳೆಂದರೆ ಧಾರವಾಡ, ಬಾಗಲಕೋಟೆ,ಹಾಸನ, ಕೊಡಗು ಮತ್ತು ವಿಜಯನಗರ. ಇಲ್ಲಿ 200 ಮಿಮಿ ವರೆಗೆ ಮಳೆ ಆಗುವ ನಿರೀಕ್ಷೆ ಇರುವುದರಿಂದ ಅರೇಂಜ್ ಅಲರ್ಟ್ ಘೋಷಿಸಲಾಗಿದೆ. ಆದರೂ ದಿಡೀರ್ ಮಳೆ, ಬಿರುಗಾಳಿ ಬರುವ ಎಚ್ಚರಿಕೆಯನ್ನು ನೀಡಲಾಗಿದೆ. ಜನರು ಸೇಫ್ ಆಗಿ ಇರುವಂತೆ ತಿಳಿಸಲಾಗಿದೆ.
ಹಾಗೆ ಎಲ್ಲೋ ಅಲರ್ಟ್ ಇರುವ ಜಿಲ್ಲೆಗಳೆಂದರೆ ಮೈಸೂರು, ಮಂಡ್ಯ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ,ಕನಕಪುರ, ರಾಮನಗರ,ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಗದಗ, ಕೊಪ್ಪಳ,ಬೀದರ್, ರಾಯಚೂರು,ದಾವಣಗೆರೆ ಮತ್ತು ಬಳ್ಳಾರಿ. ಈ ಜಿಲ್ಲೆಗಳಲ್ಲಿ ಸಾದಾರಣ ಅಥವಾ ಭಾರಿ ಮಳೆ ಆಗಬಹುದು. ಆದರೇ ಅತೀ ಹೆಚ್ಚು ಮಳೆ ಬರುವುದಿಲ್ಲ ಹಾಗಾಗಿ ಎಲ್ಲೋ ಅಲರ್ಟ್ ಘೋಷಿಸಲಾಗಿದೆ.
ರಾಜ್ಯದಲ್ಲಿನ ಹಲವು ಕಡೆಗಳಲ್ಲಿ ದಿಡೀರ್ ಮಳೆ, ಬಿರುಗಾಳಿ ಸಹಿತ ಬೀಳುವ ನಿರೀಕ್ಷೆ ಜಾಸ್ತಿ ಇರುತ್ತದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಹಾಗೂ ಕೊಡಗು ಜಿಲ್ಲೆಗಳಲ್ಲಿ ರಾತ್ರಿ ವೇಳೆಯಲ್ಲಿ ಅತೀ ಹೆಚ್ಚು ಮಳೆ ಬೀಳುತ್ತದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಬಿರುಗಾಳಿ ಮತ್ತು ಅಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ.
Rain alert : ಮುಂಗಾರು ಪ್ರಾರಂಭ ಆಗುವ ಮೊದಲೇ ಮಳೆ ಹೆಚ್ಚು ಬರುವುದರಿಂದ ರೈತರು ಎಚ್ಚರಿಕೆಯಿಂದ ಹೊಲದ ಕೆಲಸ ಮಾಡಬೇಕು. ಜಾಗರುಕರಾಗಿ ಜಮೀನಿನಲ್ಲಿ ಕೆಲಸ ಮಾಡಬೇಕು. ಬೀಜ ಬಿತ್ತನೆ ಕಾರ್ಯವನ್ನು ಸ್ವಲ ದಿನದ ಮಟ್ಟಿಗೆ ಮುಂದೂಡಬೇಕು. ಇದರಿಂದ ನಷ್ಟ ಆಗದಂತೆ ತಡೆಯಬಹುದು. ಕರ್ನಾಟಕ ರಾಜ್ಯಕ್ಕೆ ಮೇ 27 ರಿಂದ ಮುಂಗಾರು ಪ್ರವೇಶ ಆಗಲಿದೆ. ಆದರೆ ಅದಕ್ಕೆ ಮೊದಲೇ ಅತೀ ಹೆಚ್ಚು ಮಳೆಯಾಗುತ್ತಿರುವುದರಿಂದ 7 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಆದರೇ ಉಳಿದ ಜಿಲ್ಲೆಗಳು ಸಹ ಮುನ್ನೆಚ್ಚರಿಕೆ ವಹಿಸಬೇಕು.
ಒಟ್ಟಾರೆಯಾಗಿ 2025 ರಲ್ಲಿ ಮುಂಗಾರು ಪ್ರಾರಂಭ ಆಗುವ ಮೊದಲೇ ಮಳೆರಾಯನ ಆರ್ಭಟ ಜೋರಾಗಿದೆ. ಚಂಡಮಾರುತ ಹಾಗೂ ಬಿರುಗಾಳಿ ಬಿಸುವುದರಿಂದ ಜನರು ತಮ್ಮ ಕೆಲಸ ಕಾರ್ಯಗಳನ್ನು ಎಚ್ಚರಿಕೆಯಿಂದ ಮಾಡಬೇಕು. ಜೀವಹಾನಿ ಆಗದಂತೆ ಜಾಗರುಕರಾಗಿ ಇರಬೇಕು. ಇದರಿಂದ ರೈತರ ಜಮೀನು ಹಾಳಾಗದಂತೆ ಕಾಪಾಡಿಕೊಳ್ಳಬಹುದು. ದನ ಕರು,ಎತ್ತು, ಕುರಿ, ಮೇಕೆ ಹಾಗೂ ಸಾಕು ಪ್ರಾಣಿಗಳನ್ನು ಜೋಪಾನ ಮಾಡಿಕೊಳ್ಳಬೇಕು. ಮುಖ್ಯವಾಗಿ ಸಮುದ್ರದಲ್ಲಿ ಇರುವ ಮೀನುಗಾರರು ಎರಡು ಮೂರು ದಿನ ಸಮುದ್ರಕ್ಕೆ ಇಳಿಯಬಾರದು. ಸಮುದ್ರದಲ್ಲಿ ಅಲೆಗಳ ಬಡಿತ ಹೆಚ್ಚಾಗಿ ಇರುತ್ತದೆ ಹಾಗಾಗಿ ಹವಮಾನ ಇಲಾಖೆ ಸೂಚನೆ ನೀಡುವ ವರೆಗೆ ಮೀನು ಹಿಡಿಯಲು ಹೋಗಬಾರದು ಎಂದು ಜಿಲ್ಲಾಡಳಿತ ಸೂಚನೆ ಕೊಟ್ಟಿದೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.