PMMSY ಪ್ರಧಾನಮಂತ್ರಿ ಮಸ್ತ್ಯ ಸಂಪದ ಯೋಜನೆಯು ಭಾರತದ ಮೀನುಗಾರಿಕೆ ವಲಯವನ್ನು ಅಭಿವೃದ್ಧಿ ಪಡಿಸುವ ಒಂದು ಯೋಜನೆಯಾಗಿದೆ.
ಭಾರತ ದೇಶದಲ್ಲಿ ಜೀವನಕ್ಕಾಗಿ ಅನೇಕ ರೀತಿಯ ಉದ್ಯೋಗ ಮಾಡುವ ಜನರು ಬಹು ಸಂಖ್ಯೆಯಲ್ಲಿ ಇದ್ದಾರೆ. ಇದರಲ್ಲಿ ಮೀನುಗಾರಿಕೆ ಉದ್ಯೋಗವನ್ನು ಅವಲಂಬಿಸಿ ಜೀವನ ನಡೆಸುವ ಜನರ ಮತ್ತು ಮೀನುಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಭಾರತ ಸರ್ಕಾರ ಪ್ರಧಾನಮಂತ್ರಿ ಮಸ್ತ್ಯ ಸಂಪದ ಯೋಜನೆಯನ್ನು ಜಾರಿಗೆ ತಂದಿದೆ. ಭಾರತದ ಮೀನುಗಾರಿಕೆ ವಲಯವನ್ನು ಅಭಿವೃದ್ಧಿ ಪಡಿಸುವ ಒಂದು ಯೋಜನೆಯಾಗಿದೆ. ಜಲಕೃಷಿ ಕ್ಷೇತ್ರಗಳನ್ನು ಅಭಿವೃದ್ಧಿ ಪಡೆಸುವುದು, ಮೀನುಗಳ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದು ಮತ್ತು ಮೀನುಗಾರರ ಆದಾಯವನ್ನು ಹೆಚ್ಚಿಸುವ ಮುಖ್ಯ ಗುರಿಯನ್ನು ಯೋಜನೆ ಹೊಂದಿದೆ. ಭಾರತ ಸರ್ಕಾರವು ಮೀನುಗಾರರಿಗೆ ಬೇಕಾದ ಮೂಲಸೌಕರ್ಯವನ್ನು ಒದಗಿಸಿ, ಮೀನು ಉತ್ಪಾದನೆ ಮತ್ತು ಸಂಸ್ಕರಣೆಯಲ್ಲಿ ದೇಶ ಮೊದಲ ಸ್ಥಾನದಲ್ಲಿ ಇರಬೇಕು ಎಂಬ ನಿರ್ಣಯ ತೆಗೆದುಕೊಂಡಿದೆ. ಈ ಲೇಖನದಲ್ಲಿ ನಾವು PMMSY ಯೋಜನೆಯ ಪ್ರಯೋಜನಗಳು ಯಾವುವು, ಪ್ರಮುಖ ಉದ್ದೇಶ, ಗುರಿ, ಘಟಕ ಸ್ಥಾಪಿಸಲು ಅರ್ಜಿ ಸಲ್ಲಿಸುವ ವಿಧಾನ, ಅರ್ಹತೆ, ಬೇಕಾದ ದಾಖಲೆಗಳು ಹೀಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ. ಲೇಖನವನ್ನು ಪೂರ್ತಿಯಾಗಿ ಓದಿಕೊಂಡು, ಸರಿಯಾದ ಕ್ರಮದಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಿರಿ.
PMMSY : ಪ್ರಧಾನಮಂತ್ರಿ ಮಸ್ತ್ಯ ಸಂಪದ ಯೋಜನೆಯ ಸಂಪೂರ್ಣ ಮಾಹಿತಿ.

PMMSY ಮೀನುಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಭಾರತ ಸರ್ಕಾರ ಪ್ರಧಾನಮಂತ್ರಿ ಮಸ್ತ್ಯ ಸಂಪದ ಯೋಜನೆಯನ್ನು ಜಾರಿಗೆ ತಂದಿದೆ. ಭಾರತದ ಮೀನುಗಾರಿಕೆ ವಲಯವನ್ನು ಅಭಿವೃದ್ಧಿ ಪಡಿಸುವ ಒಂದು ಯೋಜನೆಯಾಗಿದೆ. ಜಲಕೃಷಿ ಕ್ಷೇತ್ರಗಳನ್ನು ಅಭಿವೃದ್ಧಿ ಪಡೆಸುವುದು, ಮೀನುಗಳ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವುದು.
- ಯೋಜನೆ ಹೆಸರು : ಪ್ರಧಾನಮಂತ್ರಿ ಮಸ್ತ್ಯ ಸಂಪದ ಯೋಜನೆ(Pradhanamantri Mastya Sampada Yojana) PMMSY.
- ಮುಖ್ಯ ಉದ್ದೇಶ : ಮೀನುಗಾರಿಕೆ ವಲಯದ ಅಭಿವೃದ್ಧಿ.
- ಇಲಾಖೆ ಹೆಸರು : ಮೀನುಗಾರಿಕೆ ಇಲಾಖೆ.
2019-20 ನೆ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಮಂದಿಸುವಾಗ ಕೇಂದ್ರ ಹಣಕಾಸು ಸಚಿವರು ಪಿಎಂಎಂಎಸ್ವೈ ಯೋಜನೆಯನ್ನು ಘೋಷಣೆ ಮಾಡಿದರು. ಸರ್ಕಾರದ ಉದ್ದೇಶ ರೈತರ ಆದಾಯವನ್ನು ಹೆಚ್ಚಿಗೆ ಮಾಡುವುದು, ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತದೆ.
ಎಲ್ಲಾ ಮೀನುಗಾರರನ್ನು ಕೃಷಿ ರೈತರೊಂದಿಗೆ ಸಂಯೋಜಿಸಲು ತೀರ್ಮಾನಿಸಲಾಯಿತು. ಮೀನುಗಾರರಿಗೆ ವಿವಿಧ ರೈತ ಕಲ್ಯಾಣ ಯೋಜನೆಗಳಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲು ನಿರ್ಧಾರ ಕೈಗೊಳ್ಳಲಾಯಿತು. ಹೊಸದಾಗಿ ರಚಿಸಲಾದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದಲ್ಲಿ ಮೀನುಗಾರಿಕೆಗಾಗಿ ಹೊಸ ಇಲಾಖೆಯನ್ನು ರಚಿಸಲಾಯಿತು. ಮೀನುಗಾರಿಕಾ ವಲಯದಲ್ಲಿ ಸಂಸ್ಕರಣೆ ತರಲು ಮತ್ತು ಮೀನುಗಾರರನ್ನು ಉತ್ತೇಜಸಲು ಕೆಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಯಿತು. ಇದರಿಂದ ಅವರ ಹಣಕಾಸಿನ ಪರಿಸ್ಥಿತಿ ಉತ್ತಮವಾಗಲು ಸಾಧ್ಯವಾಗುತ್ತದೆ.
2019-20 ನೆ ಸಾಲಿನಲ್ಲಿ ಮಂದಿಸಿದ ಕೇಂದ್ರ ಬಜೆಟ್ ನಲ್ಲಿ, ಹೊಸದಾಗಿ ರಚಿಸಲಾದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಮೂಲಕ ಮೀನುಗಾರಿಕೆ ವಲಯದಲ್ಲಿ ಅಭಿವೃದ್ಧಿ ಮಾಡಲು ಮತ್ತು ಪ್ರೊತ್ಸಹ ನೀಡಲು ಸುಮಾರು 804.75 ಕೋಟಿ ಮಿಸಲಿಡಲಾಯಿತು. ಮುಖ್ಯವಾಗಿ ಪಶುಸಂಗೋಪನೆ ಮತ್ತು ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸುವುದು. ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಕಾರ ನೀಡುವುದು. ಒಳನಾಡು ಮತ್ತು ಸಮುದ್ರ ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸುವುದು ಇದರ ಮುಖ್ಯ ಗುರಿಯಾಗಿದೆ. ಜನಸಾಮಾನ್ಯರ ಅಭಿವೃದ್ಧಿ ಜೊತೆಗೆ ದೇಶದ ಅಭಿವೃದ್ಧಿಗೆ ಸಹಕರಿಸುವುದು ಈ ಯೋಜನೆಯ ಮುಖ್ಯ ದ್ಯೇಯವಾಗಿದೆ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
PMMSY : ಪ್ರಧಾನಮಂತ್ರಿ ಮಸ್ತ್ಯ ಸಂಪದ ಯೋಜನೆಯ ಪ್ರಯೋಜನಗಳು.

ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಮೂಲಕ ಮೀನುಗಾರಿಕೆ ವಲಯದಲ್ಲಿ ಅಭಿವೃದ್ಧಿ ಮಾಡಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಪಿಎಂಎಂಎಸ್ ವೈ (PMMSY) ಯೋಜನೆಯ ಪ್ರಯೋಜನವನ್ನು ನೋಡೋಣ.
- ಮೀನುಗಾರಿಕಾ ವಲಯದ ಮೂಲಸೌಕರ್ಯಕ್ಕೆ ಹಣಕಾಸಿನ ನೆರವು ನೀಡುವುದು.
- ಮೀನುಗಾರಿಕಾ ಬಂದರುಗಳನ್ನು ಅಭಿವೃದ್ಧಿ ಮಾಡಲು ಆರ್ಥಿಕ ಸಹಾಯ ಮಾಡುವುದು.
- ಮೀನು ಕೃಷಿಕರಿಗೆ ಹಣಕಾಸಿನ ನೆರವು ನೀಡುವುದು.
- ಮೀನು ಮಾರುಕಟ್ಟೆಗಳನ್ನು ಉತ್ತಮವಾಗಿಸಲು ಸಹಕರಿಸುವುದು.
- ಮೀನು ಮೇವು ಘಟಕಗಳ ಅಭಿವೃದ್ಧಿ.
- ಮೀನುಕೃಷಿಕರಿಗೆ ಕೊಳಗಳ, ಪಂಜರಗಳ ನಿರ್ಮಾಣ ಮಾಡಲು ಆರ್ಥಿಕ ಸಹಾಯ.
- ಮೊಟ್ಟೆ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು.
- ಮೀನುಕೃಷಿ ಮಾಡಲು ಸಾಲ ಸೌಲಭ್ಯ ನೀಡುವುದು.
- ಮೀನು ಸಂಸ್ಕರಣ ಘಟಕದ ಮೂಲಸೌಕರ್ಯ ಅಭಿವೃದ್ಧಿ ಮಾಡುವುದು.
- ಮೀನುಗಾರಿಕೆ ನಿರ್ವಹಣೆಗೆ ನೆರವು ನೀಡುವುದು.
- ಮೀನು ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿ.
ಭಾರತದ ಮೀನುಗಾರಿಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವುದು ಈ ಯೋಜನೆ ಉದ್ದೇಶವಾಗಿದೆ. ಮೀನು ಕ್ಷೇತ್ರದ ಪರಿಸರ ಸ್ನೇಹಿ, ಆರ್ಥಿಕ ಮತ್ತು ಸಾಮಾಜಿಕ ಕಾರ್ಯಗಳ ಸಂಪೂರ್ಣ ಉನ್ನತ ಮಟ್ಟಕ್ಕೆ ಅಭಿವೃದ್ಧಿಪಡಿಸುವುದು ಪ್ರಧಾನಮಂತ್ರಿ ಮಸ್ತ್ಯ ಸಂಪದ ಯೋಜನೆಯ ಗುರಿಯಾಗಿದೆ. ಮೀನುಗಾರರ ಕಲ್ಯಾಣ ಮತ್ತು ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಲು 20 ಸಾವಿರ ಕೋಟಿ ಅನುದಾನವನ್ನು ಭಾರತ ಸರ್ಕಾರ ಮಿಸಲಿಟ್ಟಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು PMMSY ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ. PMMSY ನ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
PMMSY : ಪ್ರಧಾನಮಂತ್ರಿ ಮಸ್ತ್ಯ ಸಂಪದ ಯೋಜನೆಯ ಮುಖ್ಯ ಉದ್ದೇಶಗಳು.

2019-20 ನೆ ಸಾಲಿನಲ್ಲಿ ಮಂದಿಸಿದ ಕೇಂದ್ರ ಬಜೆಟ್ ನಲ್ಲಿ, ಹೊಸದಾಗಿ ರಚಿಸಲಾದ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ಮೂಲಕ ಮೀನುಗಾರಿಕೆ ವಲಯದಲ್ಲಿ ಅಭಿವೃದ್ಧಿ ಮಾಡಲು ಮತ್ತು ಪ್ರೊತ್ಸಹ ನೀಡಲು ತೀರ್ಮಾನ ಮಾಡಲಾಯಿತು. ಇದರ ಮುಖ್ಯ ಉದ್ದೇಶಗಳನ್ನು ತಿಳಿದುಕೊಳ್ಳೋಣ.
- ಮೀನುಗಾರರ ಆದಾಯವನ್ನು ಹೆಚ್ಚಿಸುವುದು : ಮೀನು ಹಿಡಿದು ಜೀವನ ಸಾಗಿಸುವ ಜನರ ಆದಾಯವನ್ನು ಡಬಲ್ ಮಾಡಲು ಸಹಾಯ ಮಾಡುವುದು. ಆರ್ಥಿಕ ಭದ್ರತೆ ಒದಗಿಸುವುದು.
- ಮೂಲಸೌಕರ್ಯ ಅಭಿವೃದ್ಧಿ ಮಾಡುವುದು : ಮೀನುಗಾರಿಕಾ ವಲಯಕ್ಕೆ ಬೇಕಾಗುವ ಮೂಲಸೌಕರ್ಯ ಪಡೆಯಲು ಹಣಕಾಸಿನ ಸಹಾಯ ನೀಡುವುದು.
- ಭೂಮಿ ಮತ್ತು ಜಲ ಸಂಪನ್ಮೂಲಗಳ ಬಳಕೆಗೆ ಪ್ರೋತ್ಸಾಹ ನೀಡುವುದು : ಮೀನು ಉತ್ಪಾದನೆ ಹೆಚ್ಚಿಸಲು ಬೇಕಾದ ಭೂಮಿ ಮತ್ತು ಜಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದು.
- ಸಮಗ್ರ ಅಭಿವೃದ್ಧಿಗೆ ಸಹಕರಿಸುವುದು : ಮೀನುಗಾರಿಕಾ ವಲಯದ ಪರಿಸರ ಅರೋಗ್ಯವಾಗಿ ಇರಲು ಬೇಕಾದ ಸೌಲಭ್ಯ ನೀಡುವುದು. ಲಾಭದಾಯಕವಾದ ಆದಾಯ ತೆಗೆಯುವ ಗುರಿಯನ್ನು ಹೊಂದಿದೆ.
- ಗುಣಮಟ್ಟ ಸುಧಾರಣೆ : ಮೀನು ಕೃಷಿ ಮಾಡವ ಸಂಸ್ಕರಣ ವ್ಯವಸ್ಥೆಯನ್ನು ಸುಧಾರಿಸುವುದು.
- ಸರಿಯಾದ ನಿರ್ವಹಣೆ ಮಾಡುವುದು : ಸುಗ್ಗಿಯ ನಂತರ ಸರಿಯಾಗಿ ನಿರ್ವಹಣೆ ಮಾಡುವುದು, ಸ್ವಚ್ಛತೆ ಕಾಪಾಡಿಕೊಳ್ಳುವುದು.
- ಸಾಮರ್ಥ್ಯ ಹೆಚ್ಚಿಸುವುದು : ಮೀನುಗಾರಿಕಾ ಕ್ಷೇತ್ರದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮತ್ತು ಸಹಕಾರ ನೀಡುವುದು.
- ಮೀನು ಉತ್ಪಾದನೆ ಹೆಚ್ಚಿಸುವುದು : ಮೀನು ಉತ್ಪಾದನೆ ಹೆಚ್ಚಿಸಲು ಬೇಕಾದ ಭೂಮಿ ಮತ್ತು ನೀರಿನ ಸೌಲಭ್ಯ ಮಾಡಿಕೊಡುವುದು.
- ರಫ್ತು ಮಾಡಲು ಸಹಕಾರ : ಮಾರಾಟ ಮಾಡಲು ಬೇಕಾದ ಎಲ್ಲಾ ರೀತಿಯ ಸೌಕರ್ಯ ಮಾಡಿಕೊಡುವುದು.
2020-21 ನೇ ಹಣಕಾಸು ವರ್ಷದಿಂದ 2024-25 ರವರೆಗೆ 5 ವರ್ಷಗಳ ಅವಧಿ ಮುಗಿಯುವ ಒಳಗೆ ಎಲ್ಲಾ ರಾಜ್ಯಗಳಿಗೂ ಯೋಜನೆ ವಿಸ್ತರಣೆ ಮಾಡುವುದು. ಕೇಂದ್ರ ಬಜೆಟ್ ನಲ್ಲಿ ಇದಕ್ಕೆ ಬೇಕಾದ ಹಣಕಾಸಿನ ನೆರವು ನೀಡಲು ತೀರ್ಮಾನಿಸಲಾಗಿದೆ.
PMMSY : ಪ್ರಧಾನಮಂತ್ರಿ ಮಸ್ತ್ಯ ಸಂಪದ ಯೋಜನೆಯ ಸೌಲಭ್ಯ ಪಡೆಯಲು ಇರಬೇಕಾದ ಅರ್ಹತೆಗಳು.
ಸರ್ಕಾರದಿಂದ PMMSY : ಪ್ರಧಾನಮಂತ್ರಿ ಮಸ್ತ್ಯ ಸಂಪದ ಯೋಜನೆಯ ಸೌಲಭ್ಯ ಪಡೆಯಲು ಕೆಲವು ಅರ್ಹತೆಗಳನ್ನು ಸರ್ಕಾರ ನಿಗದಿ ಮಾಡಿದೆ. ಈ ಅರ್ಹತೆ ಹೊಂದಿರುವವರು ಮಾತ್ರ ಸೌಲಭ್ಯ ಪಡೆಯಬಹುದು.
- ಮೀನು ಕೆಲಸ ಮತ್ತು ಮಾರಾಟಗಾರರು.
- ಮೀನುಗಾರರು.
- ಮೀನುಗಾರಿಕಾ ಅಭಿವೃದ್ಧಿ ನಿಗಮಗಳು.
- ಮೀನುಗಾರಿಕಾ ಸ್ವಸಹಾಯ ಗುಂಪುಗಳು.
- ಮೀನುಗಾರಿಕಾ ಸಹಕಾರ ಸಂಘಗಳು.
- ಮೀನು ಕೃಷಿ ಉತ್ಪಾದನೆ ಮಾಡುವ ಸಂಸ್ಥೆಗಳು.
- ಮಹಿಳೆಯರು, SC/ST ಮತ್ತು ವಿಕಲಚೇತನ ವ್ಯಕ್ತಿಗಳು.
- ರಾಜ್ಯದ ಮೀನುಗಾರಿಕೆ ಅಭಿವೃದ್ಧಿ ಮಂಡಳಿಗಳು.
ಇವರುಗಳು ಮಾತ್ರ PMMSY ಪ್ರಧಾನಮಂತ್ರಿ ಮಸ್ತ್ಯ ಸಂಪದ ಯೋಜನೆಯ ಸೌಲಭ್ಯ ಪಡೆಯಬಹುದು. ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ನೋಡುವುದಾದರೆ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
- ಅರ್ಜಿ ಸಲ್ಲಿಸುವ ವಿಧಾನ :
- PMMSY ನ ಕೇಂದ್ರ ಪ್ರಯೋಜಿತ ಯೋಜನಾ ಘಟಕಕ್ಕೆ ಅರ್ಜಿ ಸಲ್ಲಿಸುವ ವಿಧಾನ :
ಫಲಾನುಭವಿಗಳು ಪ್ರಧಾನಮಂತ್ರಿ ಮಸ್ತ್ಯ ಸಂಪದ ಯೋಜನೆಯ ಮಾರ್ಗಸೂಚಿಗೆ ಅನುಗುಣವಾಗಿ ಅರ್ಹತೆ ಹೊಂದಿರಬೇಕು. ತಮ್ಮ ಸ್ವಯಂ ಪ್ರಸ್ತಾವನೆಯನ್ನು ಸಂಪೂರ್ಣವಾಗಿ ಸಲ್ಲಿಸಬೇಕು. ಯೋಜನಾ ವರದಿಯ ಜೊತೆಗೆ ಜಿಲ್ಲಾ ಮೀನುಗಾರಿಕೆ ಅಧಿಕಾರಿಗಳು ಅವರಿಗೆ ಭರ್ತಿ ಮಾಡಿದ ಅರ್ಜಿ ನಮೂನೆ ಸಲ್ಲಿಸಬೇಕು.
- PMMSY ನ ಕೇಂದ್ರ ವಲಯದ ಯೋಜನಾ ಘಟಕಕ್ಕೆ ಅರ್ಜಿ ಸಲ್ಲಿಸುವ ವಿಧಾನ :
ಸ್ವಯಂ ಪ್ರಸ್ತಾವನೆಯನ್ನು ಮತ್ತು ಯೋಜನಾ ವರದಿಯನ್ನು ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಗೆ ಸಲ್ಲಿಸಬೇಕು. ಮೀನುಗಾರಿಕೆ ಇಲಾಖೆಯ ಅಧಿಕೃತ ವಿಳಾಸ ಕೆಳಗೆ ನೀಡಲಾಗಿದೆ.
ಕಾರ್ಯದರ್ಶಿಗಳು.
ಮೀನುಗಾರಿಕೆ ಇಲಾಖೆ,
ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ,ಭಾರತ ಸರ್ಕಾರ.
ಇಲಾಖೆಯ ಈ ವಿಳಾಸಕ್ಕೆ ಸಂಪೂರ್ಣ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಕಳುಹಿಸಬೇಕು. ಜೊತೆಗೆ ಕೇಳಿರುವ ದಾಖಲೆಗಳ ಜೇರಾಕ್ಸ್ ಪ್ರತಿಗಳನ್ನು ಕಳುಹಿಸಬೇಕು.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.