Bhu suraksha yojana : ಕರ್ನಾಟಕ ಸರ್ಕಾರವು ರೈತರ ಜಮೀನಿನ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಇಡಲು ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿದೆ.
ಕರ್ನಾಟಕ ಸರ್ಕಾರವು ರೈತರ ಜಮೀನಿನ ಸುರಕ್ಷಿತ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಣೆ ಮಾಡಿ ಇಡಲು ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಿಂದ ರೈತರು ತಮ್ಮ ಜಮೀನಿನ ದಾಖಲೆಗಳನ್ನು ಶಾಶ್ವತವಾಗಿ ಸಂರಕ್ಷಣೆ ಮಾಡಿ ಇಡಲು ಸಹಾಯವಾಗಲಿದೆ. ಈ ಮೂಲಕ ಎಲ್ಲಾ ಭೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ, ಡಿಜಿಟಲ್ ಪ್ಲಾಟ್ ಫಾರಂ ನಲ್ಲಿ ಶೇಖರಿಸಲಾಗುತ್ತದೆ. ಇದರಿಂದ ದಾಖಲೆ ನಾಶವಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಹಳೆಯ ಎಲ್ಲಾ ದಾಖಲೆಗಳು ಕಾಗದ ಪತ್ರದ ರೂಪದಲ್ಲಿ ಇರುವುದರಿಂದ ಹಾಳಾಗುವ ಸಂಭವ ಜಾಸ್ತಿ ಇರುತ್ತದೆ. ನಕಲಿ ದಾಖಲೆ ಸೃಷ್ಟಿ ಮಾಡಲು ಆಗುವುದಿಲ್ಲ. ಇದರಿಂದ ಭೂ ದಾಖಲೆ ಸುರಕ್ಷಿತ ಇರುತ್ತದೆ. ನಾಗರಿಕರಿಗೆ ಸುಲಭವಾಗಿ ಆನ್ಲೈನ್ ನಲ್ಲಿ ಭೂದಾಖಲೆ ಸಿಗುವಂತೆ ಮಾಡುವ ಮಹತ್ವದ ಗುರಿಯನ್ನು ಹೊಂದಲಾಗಿದೆ. ಈ ಲೇಖನದಲ್ಲಿ ನಾವು ಹೊಸ ಭೂ ಯೋಜನೆಗೆ ಸಂಬಂದಿಸಿದ ಎಲ್ಲಾ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
Bhu suraksha yojana : ಭೂ ಸುರಕ್ಷಾ ಯೋಜನೆ ಉದ್ದೇಶ.

Bhu suraksha yojana : ಕರ್ನಾಟಕ ಸರ್ಕಾರವು ರೈತರ ಜಮೀನಿನ ಸುರಕ್ಷಿತ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಣೆ ಮಾಡಿ, ಇಡಲು ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿರುವುದರಿಂದ ಮುಖ್ಯ ಉದ್ದೇಶ ಭೂ ದಾಖಲೆ ಸುರಕ್ಷತೆ ಮಾಡುವುದೇ ಆಗಿದೆ.
- ಅತ್ಯಂತ ಹಳೆಯ ದಾಖಲೆಯ ಸುರಕ್ಷತೆ : ಭೂ ಕಂದಾಯ ಇಲಾಖೆಯ ಎಲ್ಲಾ ಹಳೆಯ ದಾಖಲೆಗಳನ್ನು ರಕ್ಷಣೆ ಮಾಡುವುದು.
- ಡಿಜಿಟಲೀಕರಣ ಮಾಡುವುದು : ರೈತರ ಜಮೀನಿನ ಎಲ್ಲಾ ಕಾಗದ ಪತ್ರಗಳನ್ನು ಡಿಜಿಟಲ್ ಮಾಡುವುದು. ಅಂದರೆ ಡಿಜಿಟಲ್ ರೂಪಕ್ಕೆ ಪರಿವರ್ತನೆ ಮಾಡುವ ಗುರಿಯನ್ನು ಹೊಂದಿದೆ.
- ಭೂ ದಾಖಲೆಗಳ ನಷ್ಟ ಮತ್ತು ಅಕ್ರಮ ಬದಲಾವಣೆ ಮಾಡುವುದನ್ನು ತಡೆಯುವುದು.
- ತಾಲೂಕು ಕಚೇರಿಯಲ್ಲಿ ಇರುವ ರೈತರ ಭೂದಾಖಲೆ ಪತ್ರಗಳು ಕಾಣೆಯಾಗದಂತೆ ತಡೆಯುವುದು.
- ಜಮೀನಿನ ದಾಖಲೆಪತ್ರಗಳ ಪಾರದರ್ಶಕತೆ ಮತ್ತು ಸುಲಭವಾಗಿ ಸಿಗುವಂತೆ ಮಾಡುವುದು.
- ಭೂ ದಾಖಲೆಯ ನಕಲು ಪ್ರತಿಯನ್ನು ಆನ್ಲೈನ್ ಮೂಲಕ ವೀಕ್ಷಿಸಲು ಮತ್ತು ಪಡೆಯಲು ಅವಕಾಶ ಮಾಡಿಕೊಡುವುದು.
- ಕಡತಗಳ ನಿರ್ವಹಣೆಗೆ ಬೇಕಾದ ಸಮಯ ಮತ್ತು ಶ್ರಮವನ್ನು ಉಳಿಸುವುದು.
- ದಾಖಲೆಯನ್ನು ವೇಗವಾಗಿ ಹುಡುಕಲು ಸಹಾಯ ಮಾಡುವುದು.
ಹೀಗೆ ಇನ್ನೂ ಅನೇಕ ರೀತಿಯ ಉದ್ದೇಶವನ್ನು ಈ ಯೋಜನೆ ಹೊಂದಿದೆ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
Bhu suraksha yojana : ಭೂ ಸುರಕ್ಷಾ ಯೋಜನೆಯ ಪ್ರಯೋಜನಗಳು.
Bhu suraksha yojana : ಭೂ ಸುರಕ್ಷಾ ಯೋಜನೆಯ ಹಲವು ಪ್ರಯೋಜನಗಳನ್ನು ನೋಡೋಣ.
- ಜಮೀನಿನ ಮಾಹಿತಿಯನ್ನು SMS ಮೂಲಕ ಪಡೆಯಲು ಸಹಾಯ.
- ಬೆಳೆ ಹಾನಿ ಪರಿಹಾರ ಪಡೆಯಲು ಅನುಕೂಲ.
- ಜಮೀನಿನ ಮೂಲ ದಾಖಲೆಯ ರಕ್ಷಣೆ.
ನಾಗರೀಕ ಸಮಯವನ್ನು ಉಳಿಸು ಮುಖ್ಯ ಗುರಿಯನ್ನು ಹೊಂದಲಾಗಿದೆ. ಅಂದರೆ ನಾಗರೀಕರು ತಮ್ಮ ಜಮೀನಿನ ದಾಖಲೆ ಪಡೆಯಲು, ಕಚೇರಿಗಳಲ್ಲಿ ಹೆಚ್ಚು ಸಮಯ ಇರಬೇಕಾದ ಪರಿಸ್ಥಿತಿ ಇತ್ತು. ಇದನ್ನೂ ತಪ್ಪಿಸುವುದು. ಸುಲಭವಾಗಿ ದಾಖಲೆ ಸಿಗುವಂತೆ ಮಾಡುವುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ. ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
Bhu suraksha yojana :ಜಮೀನಿನ ಮಾಹಿತಿಯನ್ನು SMS ಮೂಲಕ ಪಡೆಯಲು ಸಹಾಯ : ರೈತರು ತಮ್ಮ ಜಮೀನಿನ ಮಾಹಿತಿಯನ್ನು ಮೊಬೈಲ್ ನಲ್ಲಿ SMS ಮೂಲಕ ಪಡೆಯಬಹುದು. ಅಂದರೆ ರೈತರ ಭೂ ದಾಖಲೆ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ, ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಇರುವುದರಿಂದ ಎಲ್ಲಾ ಮಾಹಿತಿಯನ್ನು ಮೊಬೈಲ್ ಮೂಲಕ ಪಡೆಯಲು ಸಾಧ್ಯವಿದೆ. ಹಾಗಾಗಿ ತಮ್ಮ ಜಮೀನಿನಲ್ಲಿ ಯಾವುದೇ ಬದಲಾವಣೆ ನಡೆದರೆ, ತಕ್ಷಣ ಮೊಬೈಲ್ ನಂಬರ್ ಗೆ sms ಬರುತ್ತದೆ. ಈ ಮೂಲಕ ರೈತರು ತಮ್ಮ ಜಮೀನಿನಲ್ಲಿ ನಡೆಯುವ ಅಕ್ರಮ ಚಟುವಟಿಕೆ ಕಂಡುಹಿಡಿಯಬಹುದು. ಯಾವುದೇ ಅಕ್ರಮ ನಡೆದರೆ ಕಂದಾಯ ಇಲಾಖೆ ಗೆ ಮಾಹಿತಿ ನೀಡಬಹುದು.
ಬೆಳೆ ಹಾನಿ ಪರಿಹಾರ ಪಡೆಯಲು ಅನುಕೂಲ : ರೈತರ ಜಮೀನಿನ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಣೆ ಮಾಡಿ ಇಡುವುದರಿಂದ ಬೆಳೆ ಹಾನಿಯಾದಾಗ ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ. ಹೆಚ್ಚಿನ ಮಳೆಯಾದಾಗ ಅಥವಾ ಬರಗಾಲ, ಬಿಸಿಲು ಜಾಸ್ತಿ ಆಗಿ ಬೆಳೆ ಹಾನಿ ಉಂಟಾದಾಗ ಪರಿಹಾರ ನೀಡಲು ಸಹಾಯವಾಗಲಿದೆ. ಬೆಳೆ ಹಾನಿ ಗುರುತಿಸಿ, ಅರ್ಹತೆ ಇರುವ ಪಲಾನುಭವಿಯನ್ನು ಆಯ್ಕೆ ಮಾಡಿ, ಪರಿಹಾರ ನೀಡಲು ಸುಲಭವಾಗುತ್ತದೆ. ಬೆಳೆ ಪರಿಹಾರ ಹಣವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಬಹುದು.
ಇದನ್ನೂ ಓದಿ : ಕಾರ್ಮಿಕರ ಕಾರ್ಡ್ (ಲೇಬರ್ ಕಾರ್ಡ್ ) ಪ್ರಯೋಜನಗಳು.
Bhu suraksha yojana : ಜಮೀನಿನ ಮೂಲ ದಾಖಲೆಯ ರಕ್ಷಣೆ : ರೈತರ ಜಮೀನಿನ ಮೂಲ ದಾಖಲೆಯನ್ನು ಸುರಕ್ಷಿತವಾಗಿ ಇಡಲು ಸಹಾಯ ಆಗುತ್ತದೆ. ಮೂಲ ದಾಖಲೆ ಹಾಳಾಗದಂತೆ ತಡೆಯಲು ಸಹಾಯವಾಗುತ್ತದೆ. ತಾಲೂಕು ಕಚೇರಿಯಲ್ಲಿ ಕಾಗದ ಪತ್ರದ ರೂಪದಲ್ಲಿ ಇರುವ ದಾಖಲೆಗಳನ್ನು ಡಿಜಿಟಲ್ ಮಾಡಿ ಇಡುವುದರಿಂದ ದಾಖಲೆ ನಷ್ಟ ಆಗುವುದಿಲ್ಲ. ಯಾವುದೇ ಬದಲಾವಣೆ ವೇಳೆಯಲ್ಲಿ ಬೇಗ ಗುರುತಿಸಿ, ಸಮಸ್ಯೆ ಬಗೆಹರಿಸಲು ಸಹಾಯ ಆಗುತ್ತದೆ. ಹಳೆಯ ಕಾಗದ ಪತ್ರ ದಾಖಲೆಯನ್ನು ಸುರಕ್ಷಿತವಾಗಿ ಇಡುವುದು ತುಂಬಾನೇ ಕಷ್ಟ. ಹಾಗಾಗಿ ಡಿಜಿಟಲ್ ನಲ್ಲಿ ಶೇಖರಣೆ ಮಾಡಿ ಇಡುವುದು ಭೂ ದಾಖಲೆ ಸುರಕ್ಷಿತವಾಗಿರಲು ಸಹಾಯ ಆಗುತ್ತದೆ.
ಭೂ ದಾಖಲೆ ಡಿಜಿಟಲೀಕರಣ ಮಾಡುವುದು : ಅತ್ಯಂತ ಹಳೆಯ ಭೂ ದಾಖಲೆಗಳು ಕಾಗದ ಪತ್ರದ ರೂಪದಲ್ಲಿ ಇದ್ದು, ಸಂಗ್ರಹಣೆ ಮಾಡಿ ಇಡಲು ಸಾಧ್ಯವಿಲ್ಲ. ಕಾಗದ ಪತ್ರ ಹರಿದು ಹೋಗುವ ಸಂದರ್ಭ ಹೆಚ್ಚಾಗಿ ಇರುವುದರಿಂದ ಸುರಕ್ಷಿತವಾಗಿ ಇಡುವ ದೃಷ್ಟಿಯಲ್ಲಿ ಈ ಯೋಜನೆ ಭೂ ಸುರಕ್ಷಾ ಯೋಜನೆ ಅನ್ನು ಸರ್ಕಾರ ಜಾರಿಗೆ ತಂದಿದೆ. ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಸಂಗ್ರಹಣೆ ಮಾಡುವುದರಿಂದ ರೈತರು ಸುಲಭವಾಗಿ, ಬೇಕಾದ ಸಮಯದಲ್ಲಿ ಪಡೆಯಲು ಸಾಧ್ಯ ಆಗುತ್ತದೆ.
ಅದೇ ಹಳೆಯ ಪದ್ಧತಿಯಲ್ಲಿ ತಮ್ಮ ಭೂ ದಾಖಲೆ ಪಡೆಯಲು ತಾಲೂಕು ಕಚೇರಿಗೆ ಹೋಗಿ, ಅರ್ಜಿ ಸಲ್ಲಿಸಬೇಕಿತ್ತು. ಅರ್ಜಿ ಸಲ್ಲಿಸಿದ ಮೇಲೆ ಅಧಿಕಾರಿಗಳು ಅದನ್ನು ಹುಡುಕಲು ತುಂಬಾ ಸಮಯ ಬೇಕಾಗಿತ್ತು. ಇದರಿಂದ ರೈತರ ಸಮಯ ಮತ್ತು ಕೆಲಸ ಹಾಳು ಹಾಗೂ ವ್ಯರ್ಥ ಆಗುತ್ತಿತ್ತು. ಹಾಗಾಗಿ ಡಿಜಿಟಲ್ ರೀತಿಯಲ್ಲಿ ಸಂಗ್ರಹಣೆ ಮಾಡುವುದು ಒಳ್ಳೆಯದು ಎಂದು ಸರ್ಕಾರ ಈ ನಿರ್ಧಾರ ಮಾಡಿದೆ. ಇದರಿಂದ ರೈತರ ಸಮಯ ಉಳಿಯುತ್ತದೆ. ಅಧಿಕಾರಿಗಳು ಸಹ ಬೇರೆ ಕೆಲಸ ಮಾಡಲು ಸಮಯ ಸಿಗುತ್ತದೆ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.