B khata ಆಸ್ತಿ ನೋಂದಣಿ ಮತ್ತೆ ಶುರು.

B khata

B khata ಯಾವುದೇ ಖಾತಾ ಇಲ್ಲದೆ ಇರುವ ಆಸ್ತಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಬಿ ಖಾತಾ ನೀಡಲು ತೀರ್ಮಾನಿಸಿದೆ.

ಕರ್ನಾಟಕ ರಾಜ್ಯ ಸರ್ಕಾರ ಯಾವುದೇ ಖಾತಾ ಇಲ್ಲದೆ ಇರುವ ಆಸ್ತಿಗಳಿಗೆ ಬಿ ಖಾತಾ ನೀಡುವ ಮಹತ್ವದ ಕಾರ್ಯ ಕೈಗೊಂಡಿದೆ. ಇದು ಬಿ ಖಾತಾ ಆಸ್ತಿ ಹೊಂದಿರುವ ಕುಟುಂಬಗಳಿಗೆ ಶುಭ ಸುದ್ದಿಯಾಗಿದೆ. ಆಸ್ತಿ ನೋಂದಣಿ ಪ್ರಕ್ರಿಯೆ ಮತ್ತೆ ಪ್ರಾರಂಭ ಮಾಡಲು ಸರ್ಕಾರದಿಂದ ತೀರ್ಮಾನಿಸಲಾಗಿದೆ. ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವು B Khata ಗೆ ಸಂಬಂಧಪಟ್ಟಂತೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ನೋಂದಣಿ ಪ್ರಕ್ರಿಯೆ ನಿಲ್ಲಿಸಿದ ಕಾರಣದಿಂದ ಹಲವಾರು ಜನರಿಗೆ ತೊಂದರೆ ಆಗಿತ್ತು. ತಮ್ಮ ಆಸ್ತಿಯನ್ನು ಖಾತೆ ಮಾಡಿಸಲು ತೊಂದರೆಯಾಗಿತ್ತು. ಈಗ ಮತ್ತೆ ಖಾತೆ ನೋಂದಣಿ ಕಾರ್ಯ ಪುನರ್ ಪ್ರಾರಂಭ ಮಾಡಲಾಗುತ್ತದೆ. ರಾಜ್ಯದಲ್ಲಿ ಆಸ್ತಿ ಖರೀದಿ ಮಾಡಲು ಯಾವುದೇ ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕೆ, ಈ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಿದೆ.

B khata ಎಂದರೇನು?.

B khata
B khata

B khata ಎಂದರೆ ನಾಗರಿಕರು ಒಂದು ನಿರ್ದಿಷ್ಟ ಭೂಮಿಯಲ್ಲಿ ವಾಸವಿದ್ದು, ಯಾವುದೇ ದಾಖಲೆಯನ್ನು ಹೊಂದಿಲ್ಲದೆ ಇರುವುದು. ಅಂದರೆ ತಾವು ಹೊಂದಿರುವ ಭೂಮಿ ಅಥವಾ ಆಸ್ತಿಯ ಮೇಲೆ ಯಾವುದೇ ದಾಖಲೆ ಇರುವುದಿಲ್ಲ. ಸರ್ಕಾರಕ್ಕೆ ಯಾವುದೇ ತೆರಿಗೆಯನ್ನು ಕಟ್ಟುವುದಿಲ್ಲ ಇಂತಹ ಆಸ್ತಿಗಳನ್ನು ಖಾತಾ ಇಲ್ಲದ ಆಸ್ತಿಗಳು ಎಂದು ಪರಿಗಣಿಸಲಾಗುವುದು. ಭಾರತ ದೇಶದಲ್ಲಿ ಭೂಮಿಗೆ ಹೆಚ್ಚಿನ ಬೆಲೆ ಇರುವುದರಿಂದ ಪ್ರತಿಯೊಬ್ಬ ನಾಗರಿಕರು ಸ್ವಲ್ಪ ಪ್ರಮಾಣದಲ್ಲಿ ಆದರೂ ಆಸ್ತಿ ಮಾಡಬೇಕು ಎಂಬುದು ಅವರ ಮುಖ್ಯ ಗುರಿಯಾಗಿದೆ.

ಅನಧಿಕೃತ ಮತ್ತು ಸರ್ಕಾರಕ್ಕೆ ಯಾವುದೇ ಆಸ್ತಿ ತೆರಿಗೆಯನ್ನು ಕಟ್ಟದೇ ಇರುವ ಆಸ್ತಿಗಳು. ಆಸ್ತಿ ತೆರಿಗೆಯ ಕಾನೂನನ್ನು ತಿದ್ದುಪಡಿ ಮಾಡಿದ ನಂತರ ಈ ತರಹದ ಆಸ್ತಿಗಳಿಗೆ ಹೆರಿಗೆ ಕಟ್ಟುವ ವ್ಯವಸ್ಥೆಯನ್ನು ಮಾಡಲಾಯಿತು ಇದನ್ನು ಬೇಕಾದ ಎಂದು ಕರೆಯಲಾಗಿದೆ. ಹೊಸ ಮತ್ತು ಏಕರೂಪದ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.

B khata ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

B khata : ಭಾರತ ದೇಶದಾದ್ಯಂತ ಅನೇಕ ಜನರು ಅಲ್ಪಸ್ವಲ್ಪ ಮಟ್ಟದಲ್ಲಿ ಆಸ್ತಿಯನ್ನು ಹೊಂದಿದ್ದರೂ ಸಹ ಸರ್ಕಾರದಿಂದ ಯಾವುದೇ ರೀತಿಯ ರಿಜಿಸ್ಟರ್ ಆಗಿರುವುದಿಲ್ಲ. ಆಸ್ತಿ ಯಾರ ಹೆಸರಿನಲ್ಲಿದೆ, ಯಾವ ಕುಟುಂಬಕ್ಕೆ ಸೇರಿದ್ದು ಎಂಬ ಮಾಹಿತಿ ಇರುವುದಿಲ್ಲ. ಅಧಿಕೃತ ದಾಖಲೆಗಳು ಇರುವುದಿಲ್ಲ. ಇದರಿಂದ ಜನರಿಗೆ ಅನೇಕ ತೊಂದರೆಗಳು ಆಗುತ್ತವೆ. ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯವನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಪಡೆಯಬೇಕಾದರೆ ಜನರು ತಮ್ಮ ಆಸ್ತಿಯನ್ನು ಖಾತೆ ಮಾಡಿಸಬೇಕು. ಇದರಿಂದ ಸರ್ಕಾರಕ್ಕೆ ಯಾವ ಭೂಮಿಗೆ ಸೇರಿದ್ದು ಎಂಬ ಮಾಹಿತಿ ಸಿಗುತ್ತದೆ. ಇದರಿಂದ ಸರ್ಕಾರ ಕೃಷಿ ಮತ್ತು ಜಮೀನಿಗೆ ಸಂಬಂಧಿಸಿದ ಸೌಲಭ್ಯಗಳನ್ನು ನೀಡಲು ಸಹಾಯವಾಗುತ್ತದೆ. ಖಾತಾದಾರರಿಗೂ ಸಹ ಅನೇಕ ರೀತಿಯ ಸೌಲಭ್ಯಗಳು ಸಿಗುತ್ತವೆ. ಉದಾಹರಣೆಗೆ ಆಸ್ತಿಯ ಮೇಲೆ ಸಾಲ ಸೌಲಭ್ಯವನ್ನು ಪಡೆಯಬಹುದು.

ಆಸ್ತಿಗಳ ಖರೀದಿಯಲ್ಲಿ ಯಾವುದೇ ಮೋಸವಾಗಬಾರದು ಅಥವಾ ಆಸ್ತಿ ಮಾರಾಟ ಮಾಡುವ ಸಂದರ್ಭದಲ್ಲಿಯೂ ಸಹ ಯಾವುದೇ ರೀತಿಯ ಹಣದ ಅವ್ಯವಹಾರ ನಡೆಯಬಾರದು ಎಂದರೆ ಆಸ್ತಿಯನ್ನು ಖಾತೆಯಾಗಿ ಪರಿವರ್ತಿಸಬೇಕು. ಆಗ ಆಸ್ತಿ ಮಾರಾಟ ಮಾಡುವವರೆಗೂ ಮತ್ತು ಖರೀದಿ ಮಾಡುವವರಿಗೂ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ. ಈ ಕಾರಣದಿಂದಾಗಿ ಇ ಖಾತಾ ಹೊಂದುವುದು ಕಡ್ಡಾಯವಾಗಿದೆ.

ರಾಜ್ಯ ಸರ್ಕಾರ ಬಿ ಖಾತಾ ಇರುವವರಿಗೆ ಇ ಖಾತಾ ನೀಡಲು ನಿರ್ಧರಿಸಿದೆ. B khata ನೀಡಲು ಮೊದಲು ಮೂರು ತಿಂಗಳಗಳ ಕಾಲ ಅವಕಾಶವನ್ನು ನೀಡಲಾಗಿತ್ತು. ಆದರೆ ವೆಬ್ಸೈಟ್ ನಲ್ಲಿನ ತಾಂತ್ರಿಕ ತೊಂದರೆಯಿಂದಾಗಿ ಈ ಕಾರ್ಯ ರದ್ದು ಮಾಡಲಾಗಿತ್ತು. ಅನಧಿಕೃತ ಅಸ್ತಿ ಹೊಂದಿರುವ ಎಲ್ಲರಿಗೂ ಖಾತಾ ಸಿಗದೇ ಇರುವುದರಿಂದ ಈಗ ಮತ್ತೆ ಬಿ ಖಾತಾ ನೊಂದಣಿ ಕಾರ್ಯವನ್ನು ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ. ಮುಂದಿನ ಮೂರು ತಿಂಗಳಗಳ ಅವಧಿಗೆ ವಿಸ್ತರಿಸಲಾಗಿದೆ. ಆಸ್ತಿ ನೋಂದಣಿ ಆಗದೆ ಇರುವವರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಸರ್ಕಾರ ತಿಳಿಸಿದೆ.

ಜೂನ್ ತಿಂಗಳ ಮೊದಲ ವಾರದಿಂದಲೇ ಮತ್ತೇ ನೊಂದಣಿ ಕಾರ್ಯವನ್ನು ಪ್ರಾರಂಭಿಸಲಾಗುವುದು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಆಸ್ತಿ ರಿಜಿಸ್ಟರ್ ಮಾಡಿಕೊಳ್ಳಲು ಸರ್ಕಾರ ಹೊಸ ಅವಕಾಶವನ್ನು ನೀಡಿದೆ. B ಖಾತಾ ನಿವೇಶನಗಳ ನೋಂದಣಿ ಕಾರ್ಯವನ್ನು ಆರಂಭಿಸುವ ಬಗ್ಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರು ಕೆ.ಎ. ದಯಾನಂದ ಅವರು ತಿಳಿಸಿದ್ದಾರೆ. ಕಳೆದ ಐದಾರು ತಿಂಗಳುಗಳಿಂದ ಇ ಸ್ವತ್ತು ಆಗದೇ ಇರುವ ನಿವೇಶನಗಳಿಗೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಲು ಸಾಧ್ಯವಾಗಿಲ್ಲ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿತ್ತು. ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡ ಮೇಲೆ ಸರ್ಕಾರ ಮತ್ತೆ ಬಿ ಖಾತಾ ನೊಂದಣಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮುಂದಾಗಿದೆ. ಇದರಿಂದ ರಾಜ್ಯದ ಲಕ್ಷಾಂತರ ಆಸ್ತಿದಾರರಿಗೆ ಲಾಭವಾಗುತ್ತದೆ. ಸರ್ಕಾರಿ ಸೌಲಭ್ಯಗಳು ಸಿಗುತ್ತವೆ. ಈಗಾಗಲೇ ರಿಜಿಸ್ಟ್ರೇಷನ್ ಆಗಿರುವ ಸೈಟ್ ಗಳಿಗೆ ಇ ಸ್ವತ್ತು ಸಿಗುತ್ತದೆ.

B khata ಬಿ ಖಾತೆಯನ್ನು ಮಾಡುವುದರಿಂದ ಸಿಗುವ ಸೌಲಭ್ಯಗಳು.

ಪ್ರಮುಖವಾಗಿ ಹೇಳುವುದಾದರೆ ಖಾತಾಗಳು ಆಸ್ತಿಗೆ ಸಂಬಂಧಿಸಿದ ಅತ್ಯಂತ ಪ್ರಮುಖ ಮತ್ತು ಮಹತ್ವದ ದಾಖಲೆಗಳಾಗಿವೆ. ಖಾತೆ ಮಾಡಿಸುವುದರಿಂದ ಸಿಗುವ ಸೌಲಭ್ಯಗಳನ್ನು ನೋಡೋಣ.

ಸರ್ಕಾರದಿಂದ ಮೂಲಸೌಕರ್ಯದ ಸೌಲಭ್ಯ ಪಡೆಯಲು ನೆರವಾಗುತ್ತದೆ.

ನಾಗರಿಕ ಸೌಲಭ್ಯಗಳನ್ನು ಪಡೆಯಲು ಸಹಾಯವಾಗುತ್ತದೆ ಉದಾಹರಣೆಗೆ ನೀರು ವಿದ್ಯುತ್ ಇತ್ಯಾದಿ.

ಬ್ಯಾಂಕುಗಳಿಂದ ಸಾಲವನ್ನು ಪಡೆಯಲು ಸಹಾಯವಾಗುತ್ತದೆ.

ಮನೆ ಕಟ್ಟಲು ಆಸ್ತಿಯ ಮೇಲೆ ಸಾಲವನ್ನು ಪಡೆಯಬಹುದು.

ಆಸ್ತಿ ಮಾರಾಟ ಮಾಡಲು ಸಹಾಯವಾಗುತ್ತದೆ.

ಯಾವುದೇ ಹಣಕಾಸಿನ ಅವ್ಯವಹಾರ ನಡೆಯದಂತೆ ನೋಡಿಕೊಳ್ಳಬಹುದು.

ಕಟ್ಟಡ ಪರವಾನಿಗೆ ಪಡೆಯಲು ಮುಖ್ಯವಾಗಿ ಖಾತಾ ಹೊಂದಿರಬೇಕು.

ಯಾವುದೇ ರೀತಿಯ ವಾಣಿಜ್ಯ ಪರವಾನಿಗೆ ಪಡೆಯಲು ಸಹಾಯ.

ಕರ್ನಾಟಕ ರಾಜ್ಯ ಸರ್ಕಾರ ಯಾವುದೇ ಖಾತಾ ಇಲ್ಲದೆ ಇರುವ ಆಸ್ತಿಗಳಿಗೆ ಬಿ ಖಾತಾ ನೀಡುವ ಮಹತ್ವದ ಕಾರ್ಯ ಕೈಗೊಂಡಿದೆ. ಇದು ಬಿ ಖಾತಾ ಆಸ್ತಿ ಹೊಂದಿರುವ ಕುಟುಂಬಗಳಿಗೆ ಶುಭ ಸುದ್ದಿಯಾಗಿದೆ. ಆಸ್ತಿ ನೋಂದಣಿ ಪ್ರಕ್ರಿಯೆ ಮತ್ತೆ ಪ್ರಾರಂಭ ಮಾಡಲು ಸರ್ಕಾರದಿಂದ ತೀರ್ಮಾನಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿತ್ತು. ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡ ಮೇಲೆ ಸರ್ಕಾರ ಮತ್ತೆ ಬಿ ಖಾತಾ ನೊಂದಣಿ ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮುಂದಾಗಿದೆ.

ಜೂನ್ ತಿಂಗಳ ಮೊದಲ ವಾರದಿಂದಲೇ ಮತ್ತೇ ನೊಂದಣಿ ಕಾರ್ಯವನ್ನು ಪ್ರಾರಂಭಿಸಲಾಗುವುದು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ನಿರ್ದಿಷ್ಟ ಭೂಮಿಯಲ್ಲಿ ವಾಸವಿದ್ದು, ಯಾವುದೇ ದಾಖಲೆಯನ್ನು ಹೊಂದಿಲ್ಲದೆ ಇರುವುದು. ಅಂದರೆ ತಾವು ಹೊಂದಿರುವ ಭೂಮಿ ಅಥವಾ ಆಸ್ತಿಯ ಮೇಲೆ ಯಾವುದೇ ದಾಖಲೆ ಇರುವುದಿಲ್ಲ. ಇದರಿಂದಾಗಿ ಸರ್ಕಾರದ ಯಾವುದೇ ಸೌಲಭ್ಯಗಳು ಸಿಗುತ್ತಿರಲಿಲ್ಲ. ಈಗ ಸರ್ಕಾರ ಮತ್ತೆ ಖಾತೆ ನೀಡಲು ತೀರ್ಮಾನ ಮಾಡಿರುವುದರಿಂದ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ತಾವು ಹೊಂದಿದ ಆಸ್ತಿಯ ಮೇಲೆ ಒಂದು ಅಧಿಕೃತ ದಾಖಲೆಯನ್ನು ಪಡೆಯಬಹುದಾಗಿದೆ.

ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

Leave a Reply

Your email address will not be published. Required fields are marked *