Arogya Sanjeevini yojana ಅರೋಗ್ಯ ಸಂಜೀವಿನಿ ಯೋಜನೆ.

Arogya Sanjeevini yojana

Arogya Sanjeevini yojana ಅರೋಗ್ಯ ಸಂಜೀವಿನಿ ಯೋಜನೆ(KASS)ಯು ಅರೋಗ್ಯ ಸೇವಾ ಯೋಜನೆಯಾಗಿ ಸರ್ಕಾರಿ ನೌಕರರಿಗೆ ಆಶಾಕಿರಣವಾಗಿದೆ.

ಕರ್ನಾಟಕ ರಾಜ್ಯ ಸರ್ಕಾರ ರಾಜ್ಯದ ಸರ್ಕಾರಿ ನೌಕರರ ಅರೋಗ್ಯ ಸುರಕ್ಷತೆಗಾಗಿ ಕರ್ನಾಟಕ ಅರೋಗ್ಯ ಸಂಜೀವಿನಿ ಯೋಜನೆಯನ್ನು ಜಾರಿಗೆ ತಂದಿದೆ. ಸರ್ಕಾರಿ ನೌಕರರಿಗೆ ನಗದು ರಹಿತ ವೈದ್ಯಕೀಯ ಸೌಲಭ್ಯ ನೀಡುವ ಮುಖ್ಯ ಗುರಿಯನ್ನು ಹೊಂದಿದೆ. ಇದರಿಂದ ನೌಕರರ ಕುಟುಂಬಕ್ಕೆ ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಗಿದೆ. ಇದರ ಪ್ರಯೋಜನವನ್ನು ವಿವಿಧ ಇಲಾಖೆಯ ನೌಕರರು ಮತ್ತು ಅವರ ಕುಟುಂಬದ ಸದಸ್ಯರು ಪಡೆಯಲು ಅರ್ಹತೆ ಹೊಂದಿದ್ದಾರೆ. ಅನೇಕ ರೀತಿಯ ಕಾಯಿಲೆಗಳಿಗೆ ಉಚಿತ ಶಸ್ತ್ರ ಚಿಕಿತ್ಸೆ ದೊರೆಯಲಿದೆ. ಈ ಯೋಜನೆಯನ್ನು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುವರ್ಣ ಅರೋಗ್ಯ ಸುರಕ್ಷಾ ಟ್ರಸ್ಟ್ (SAST) ನಿಭಾಯಿಸುತ್ತದೆ. ವೈದ್ಯಕೀಯ ಚಿಕಿತ್ಸೆ,ಒಳರೋಗಿ ಚಿಕಿತ್ಸೆ ಮತ್ತು ಔಷಧಿ, ಅರೋಗ್ಯ ತಪಾಸಣೆ ಮುಂತಾದ ಸೌಲಭ್ಯಗಳು ದೊರೆಯಲಿದೆ. ಈ ಲೇಖನದಲ್ಲಿ ನಾವು ಅರೋಗ್ಯ ಸಂಜೀವಿನಿ ಯೋಜನೆ ಎಂದರೇನು?,ಅರ್ಹತೆ, ಉಚಿತ ಚಿಕಿತ್ಸೆ ಸಿಗುವ ಕಾಯಿಲೆಗಳು ಯಾವುವು, ಸೌಲಭ್ಯ ಪಡೆಯಲು ಬೇಕಾದ ದಾಖಲೆಗಳು, ಪ್ರಯೋಜನಗಳು ಮತ್ತು ನೊಂದಣಿ ಮಾಡಿಕೊಳ್ಳುವ ವಿಧಾನದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ

Arogya Sanjeevini yojana ಅರೋಗ್ಯ ಸಂಜೀವಿನಿ ಯೋಜನೆಯ ಸಂಪೂರ್ಣ ವಿವರ.

Arogya Sanjeevini yojana
Arogya Sanjeevini yojana

Arogya Sanjeevini yojana : ಕರ್ನಾಟಕ ಅರೋಗ್ಯ ಸಂಜೀವಿನಿ ಯೋಜನೆ ಸರ್ಕಾರಿ ನೌಕರರ ಅರೋಗ್ಯ ಕಲ್ಯಾಣ ಯೋಜನೆಯಾಗಿದೆ. ಅವರ ಮತ್ತು ಕುಟುಂಬದ ಸದಸ್ಯರು ಉಚಿತ ಅರೋಗ್ಯ ಸೇವೆಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

  • ಯೋಜನೆ ಹೆಸರು : ಕರ್ನಾಟಕ ಅರೋಗ್ಯ ಸಂಜೀವಿನಿ ಯೋಜನೆ(Karnataka Arogya Sanjeevini Yojana).
  • ಇಲಾಖೆ ಹೆಸರು : ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
  • ಅನುಷ್ಠಾನ ಸಂಸ್ಥೆ : ಸುವರ್ಣ ಅರೋಗ್ಯ ಸುರಕ್ಷಾ ಟ್ರಸ್ಟ್ (SAST).
  • ಉದ್ದೇಶ : ಸರ್ಕಾರಿ ನೌಕರರಿಗೆ ಅರೋಗ್ಯ ಸೇವೆ.
  • ಯೋಜನೆ ಜಾರಿಗೆ ಬಂದ ವರ್ಷ : 22 ಜುಲೈ 2021.

ಆರು ಲಕ್ಷ ಸರ್ಕಾರಿ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಸೇರಿ ಸುಮಾರು 25 ಲಕ್ಷಕ್ಕಿಂತ ಹೆಚ್ಚಿನ ಫಲಾನುಭವಿಗಳು ಸೌಲಭ್ಯ ಪಡೆಯಲಿದ್ದಾರೆ. ಮರಣಾಂತಿಕ ಕಾಯಿಲೆಗಳು ಮತ್ತು ಶಸ್ತ್ರ ಚಿಕಿತ್ಸೆ ಸೇರಿದಂತೆ ಇನ್ನೂ ಅನೇಕ ರೀತಿಯ ರೋಗಗಳಿಗೆ ಉಚಿತ ಚಿಕಿತ್ಸೆ ದೊರೆಯುತ್ತದೆ. ಒಳರೋಗಿ ಮತ್ತು ಹೊರರೋಗಿಗಳಿಗೂ ಉಚಿತ ಅರೋಗ್ಯ ಸೌಲಭ್ಯ ಸಿಗುತ್ತದೆ. ಸರ್ಕಾರ ನಿಗದಿಪಡಿಸಿದ ಅಥವಾ ಆಯ್ಕೆ ಮಾಡಿದ ಆಸ್ಪತ್ರೆಗಳಲ್ಲಿ ಉಚಿತವಾಗಿ ಅರೋಗ್ಯಸೇವೆ ದೊರೆಯುತ್ತದೆ.

ಸುವರ್ಣ ಅರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಈ ಯೋಜನೆಯ ಸೌಲಭ್ಯ ಪಡೆಯಬಹುದು. ಮೊದಲು ಟ್ರಸ್ಟ್ ಮೂಲಕ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡಿರುವ ಫಲಾನುಭವಿಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಬೇಕಾಗುವ ಹಣಕಾಸಿನ ವೆಚ್ಚವನ್ನು ಟ್ರಸ್ಟ್ ಭರಿಸುತ್ತದೆ. ಸುಮಾರು ವಿವಿಧ ರೀತಿಯ ಕಾಯಿಲೆಗಳಿಗೆ ನಗದು ರಹಿತ ಸೌಲಭ್ಯ ಸಿಗುತ್ತದೆ. ಸರ್ಕಾರಿ ನೌಕರರ ಕುಟುಂಬದ ಸದಸ್ಯರು ಸಹ ವೈದ್ಯಕೀಯ ಸೌಲಭ್ಯಕ್ಕೆ ಹಣಕಾಸು ಖರ್ಚು ಮಾಡಬೇಕಾಗಿಲ್ಲ.

2021 ಜುಲೈ 22 ರಂದು ಕರ್ನಾಟಕ ಅರೋಗ್ಯ ಸಂಜೀವಿನಿ ಯೋಜನೆ(Karnataka Arogya Sanjeevini Yojana) ಜಾರಿಗೆ ತರಲಾಯಿತು. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಅಧ್ಯಕ್ಷತೆಯಲ್ಲಿ ನಡೆದ ಸಚಿವರು ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸುವರ್ಣ ಅರೋಗ್ಯ ಸುರಕ್ಷತಾ ಟ್ರಸ್ಟ್, ಅರೋಗ್ಯ ಇಲಾಖೆ ಸಿಬ್ಬಂದಿಗಳು, ಆಡಳಿತ ಸುಧಾರಣೆ ಇಲಾಖೆ ಮತ್ತು ನೌಕರರ ಸಂಘಟನೆಗಳ ಅಭಿಪ್ರಾಯದ ಮೇರೆಗೆ ಯೋಜನೆಯನ್ನು ಕಾರ್ಯಗತ ಮಾಡಲು ತೀರ್ಮಾನ ಕೈಗೊಳ್ಳಲಾಯಿತು. ಸರ್ಕಾರಿ ನೌಕರರಿಗೆ ಅನುಕೂಲ ಆಗುವಂತೆ ಯೋಜನೆ ಜಾರಿಯಾಗಿದೆ.

Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್, ಸರ್ಕಾರಿ ಯೋಜನೆಗಳ ಮಾಹಿತಿ ಮತ್ತು ಹೊಸ ಉದ್ಯೋಗ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ಪ್ ಮತ್ತು ಟೆಲಿಗ್ರಾಮ್ ಗ್ರೂಪ್ ಗಳಿಗೆ ಜಾಯಿನ್ ಆಗಿರಿ. Whatsapp ಮತ್ತು Telegram ಗ್ರೂಪ್ ವಿಳಾಸ ಇಲ್ಲಿ ನೀಡಲಾಗಿದೆ.

ನಮ್ಮ ವಾಟ್ಸಪ್ಪ್ ಗ್ರೂಪ್ ಗೆ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ನಮ್ಮ ಟೆಲಿಗ್ರಾಮ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

Arogya Sanjeevini yojana ಅರೋಗ್ಯ ಸಂಜೀವಿನಿ ಯೋಜನೆ ಎಂದರೇನು?.

Arogya Sanjeevini yojana
Arogya Sanjeevini yojana

ಕರ್ನಾಟಕ ಅರೋಗ್ಯ ಸಂಜೀವಿನಿ ಯೋಜನೆ ಎಂದರೆ,ಸರ್ಕಾರಿ ನೌಕರರಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ನಗದು ರಹಿತ ಅರೋಗ್ಯ ಸೇವೆ ನೀಡಲು ಜಾರಿಗೆ ತಂದಿರುವ ಒಂದು ಯೋಜನೆಯಾಗಿದೆ. ಉಚಿತವಾಗಿ ವೈದ್ಯಕೀಯ ಸೌಲಭ್ಯ ನೀಡುವುದು ಇದರಲ್ಲಿ ಮುಖ್ಯ ಉದ್ದೇಶವಾಗಿದೆ. ಇದನ್ನೂ ಅರೋಗ್ಯ ಇಲಾಖೆ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುವರ್ಣ ಅರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಜಾರಿ ಮಾಡಲಾಗಿದೆ.

ಈ ಯೋಜನೆಯ ಮೂಲಕ ಅಲೋಪತಿ ಮತ್ತು ಆಯುಷ್ ಚಿಕಿತ್ಸೆ ಪದ್ಧತಿಗಳನ್ನು, ಒಳರೋಗಿ ಮತ್ತು ಹೊರರೋಗಿ ಚಿಕಿತ್ಸೆಯನ್ನು ಸರ್ಕಾರಿ ನೌಕರ ಮತ್ತು ಅವನ ಕುಟುಂಬ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಸೌಲಭ್ಯವನ್ನು ಒಂದೇ ಭಾರಿಗೆ ಜಾರಿಗೆ ತರಲು ಸಾಧ್ಯವಿಲ್ಲ ಹಾಗಾಗಿ ಹಂತ ಹಂತವಾಗಿ ಒಂದೊಂದೇ ಚಿಕಿತ್ಸೆ ಜಾರಿಗೆ ತರಲು ನಿರ್ಧಾರಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಕರ್ನಾಟಕ ಅರೋಗ್ಯ ಸಂಜೀವಿನಿ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. KASS ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.

Arogya Sanjeevini yojana ಅರೋಗ್ಯ ಸಂಜೀವಿನಿ ಯೋಜನೆಯ ಅರ್ಹತೆಗಳು.

Arogya Sanjeevini yojana
Arogya Sanjeevini yojana

ಕರ್ನಾಟಕ ಅರೋಗ್ಯ ಸಂಜೀವಿನಿ ಯೋಜನೆಯ ಸೌಲಭ್ಯ ಪಡೆಯಲು ಬೇಕಾದ ಅರ್ಹತಾ ಮಾನದಂಡಗಳನ್ನು ನೋಡೋಣ.

  1. ಎಲ್ಲಾ ಸರ್ಕಾರಿ ನೌಕರರು ಈ ಯೋಜನೆ ಸೌಲಭ್ಯ ಪಡೆಯಬಹುದು.
  2. ನೋಂದಣಿ ಮಾಡಿಕೊಂಡಿರುವ ಸರ್ಕಾರಿ ನೌಕರರು.
  3. ನೋಂದಣಿ ಮಾಡಿಕೊಂಡ ಸರ್ಕಾರಿ ನೌಕರರ ಕುಟುಂಬ ಸದಸ್ಯರು.
  4. ಸ್ಥಳೀಯ ಸಂಸ್ಥೆಯ ಉದ್ಯೋಗಿಗಳು ಅರ್ಹರಲ್ಲ.
  5. ಅನುಧಾನಿತ ಸಂಸ್ಥೆಯ ಕೆಲಸಗಾರರಿಗೆ ಅರ್ಹತೆ ಇಲ್ಲ.
  6. ವಿಶ್ವ ವಿದ್ಯಾಲಯದ ನೌಕರರು ಅರ್ಹರಲ್ಲ.
  7. ಅರೋಗ್ಯ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಅರ್ಹರಿರುವುದಿಲ್ಲ.
  8. ಅರೋಗ್ಯ ಭಾಗ್ಯ ಯೋಜನೆಗೆ ಒಳಪಟ್ಟ ನೌಕರರಿಗೆ ಅವಕಾಶ ಇರುವುದಿಲ್ಲ.
  9. ರಾಜ್ಯ ಸರ್ಕಾರಿ ನೌಕರರು ಅರ್ಹತೆ ಹೊಂದಿದ್ದಾರೆ.
  10. ರಾಜ್ಯದ ನ್ಯಾಯಾಲಯದ ಉದ್ಯೋಗಿಗಳು ಅರ್ಹರು.
  11. ಕರ್ನಾಟಕ ವಿಧಾನಸಭಾ ನೌಕರರು ಸಹ ಸೌಲಭ್ಯ ಪಡೆಯಬಹುದು.
  12. ಕರ್ನಾಟಕ ವಿಧಾನಪರಿಷತ್ ಉದ್ಯೋಗಿಗಳು ಅರ್ಹತೆ ಹೊಂದಿದ್ದಾರೆ.

ಹೀಗೆ ಕೆಲವು ಅರ್ಹತಾ ಮಾನದಂಡಗಳನ್ನು ನಿಗದಿ ಮಾಡಲಾಗಿದೆ. ಇವುಗಳ ವ್ಯಾಪ್ತಿಯ ಒಳಗೆ ಬರುವ ಉದ್ಯೋಗಿಗಳು ಯೋಜನೆ ಸೌಲಭ್ಯ ಪಡೆಯಲು ಸಾಧ್ಯವಿದೆ.

  • ನೌಕರರ ಕುಟುಂಬ ಸದಸ್ಯರ ಅರ್ಹತ ಮಾನದಂಡಗಳು :
  1. ಕುಟುಂಬದ ಸದಸ್ಯರ ವಯಸ್ಸು 30 ವರ್ಷ ಆಗಿರಬೇಕು.
  2. ನಿರುದ್ಯೋಗಿ ಆಗಿರಬೇಕು.
  3. ವಿಧವೆ ಅಥವಾ ವಿಚ್ಛೆದಿತ ಮಗಳಿಗೆ ವೈದ್ಯಕೀಯ ಸೌಲಭ್ಯ ಪಡೆಯಲು ಅವಕಾಶ ಇದೆ.
  4. ದೈಹಿಕ ಮತ್ತು ಮಾನಸಿಕ ಅಸ್ವಸ್ಥ ಮಕ್ಕಳು ಪಡೆಯಬಹುದು.

Arogya Sanjeevini yojana ಅರೋಗ್ಯ ಸಂಜೀವಿನಿ ಯೋಜನೆ ಅಡಿಯಲ್ಲಿ ಉಚಿತ ಚಿಕಿತ್ಸೆ ಸಿಗುವ ಕಾಯಿಲೆಗಳು.

Arogya Sanjeevini yojana
Arogya Sanjeevini yojana

ಸರ್ಕಾರಿ ನೌಕರ ಮತ್ತು ಅವನ ಕುಟುಂಬ ಸದಸ್ಯರು ಕರ್ನಾಟಕ ಅರೋಗ್ಯ ಸಂಜೀವಿನಿ ಯೋಜನೆ ಅಡಿಯಲ್ಲಿ ಯಾವ ಯಾವ ಕಾಯಿಲೆಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯಬಹುದು ಎಂಬುದನ್ನು ನೋಡೋಣ.

  • ಕ್ಯಾನ್ಸರ್ ರೋಗ.
  • ಹೃದಯ ಸಂಬಂಧಿ ಕಾಯಿಲೆಗಳು.
  • ಕಿಡ್ನಿ ವೈಫಲ್ಯ.
  • ಮೂಳೆ ರೋಗಗಳು.
  • ಮಕ್ಕಳ ಚಿಕಿತ್ಸೆ.
  • ತುರ್ತು ಚಿಕಿತ್ಸೆಗಳು.
  • ಕಣ್ಣಿನ ಸಂಬಂದಿಸಿದ ಕಾಯಿಲೆಗಳು.

ಇವುಗಳು ಸೇರಿದಂತೆ ಇನ್ನೂ ಅನೇಕ ರೀತಿಯ ರೋಗಗಳಿಗೆ ಉಚಿತ ಸೌಲಭ್ಯ ಪಡೆಯಬಹುದು. ಒಳರೋಗಿ ಮತ್ತು ಹೊರರೋಗಿಗಳಾಗಿ ದಾಖಲಾದ ರೋಗಿಗಳಿಗೆ ಎಕ್ಸರೆ, ಸಿಟಿ ಸ್ಕ್ಯಾನಿಂಗ್ ಮತ್ತು ಇಸಿಜಿ, ರೆಡಿಯಾಲಜಿ, ಎಂ.ಆರ್.ಐ ಹಾಗೂ ಶಸ್ತ್ರ ಚಿಕಿತ್ಸೆ, ತುರ್ತು ಚಿಕಿತ್ಸೆ, ಔಷಧಿಗಳು ಸಹ ಉಚಿತವಾಗಿ ಸಿಗುತ್ತವೆ.ಈ ಯೋಜನಾ ವೆಚ್ಚ ವಾರ್ಷಿಕ ಒಂದು ಸಾವಿರ ಕೋಟಿ.

ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ ಮತ್ತು ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.

 

 

 

Leave a Reply

Your email address will not be published. Required fields are marked *