Arivu Education loan scheme ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಲ್ಯಾಣ ಇಲಾಖೆ ಈ ಯೋಜನೆಯನ್ನು ಜಾರಿಗೆ ತಂದಿದೆ.
ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅರಿವು ಶಿಕ್ಷಣ ಸಾಲ ಯೋಜನೆಯನ್ನು ಪ್ರಾರಂಭ ಮಾಡಿದ್ದು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಜಾರಿಗೋಳಿಸಿದೆ. ವೃತ್ತಿಪರ ಕೋರ್ಸ್ ಗಳನ್ನು ಮುಂದುವರೆಸಲು ಬಯಸುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು ಒದಗಿಸುವ ಮುಖ್ಯ ಗುರಿಯನ್ನು ಹೊಂದಿದೆ. ಈ ಯೋಜನೆಗೆ ಒಳಪಡುವ ವೃತ್ತಿಪರ ಕೋಸ್ ಗಳನ್ನು ನೋಡುವುದಾದರೆ, ಎಂ.ಬಿ.ಬಿ.ಎಸ್ (MBBS),ಎಂ.ಡಿ(MD),ಎಂ.ಎಸ್(MS),ಬಿಇ(BE), ಬಿ.ಟೆಕ್(B.Tech), ಎಂಇ(ME), ಎಂ.ಟೆಕ್(M.Tech), ಆಯುಷ್ ವೈದ್ಯಕೀಯ ಕೋರ್ಸ್, ಎಂ.ಬಿ.ಎ(MBA), ಎಂ.ಡಿ.ಎಸ್(MDS), ಎಂ.ಸಿ.ಎ(MCA), ಕಾನೂನು ಪದವಿ(LLB), ಬಿ.ಎಸ್ಸಿ(B.Sc), ಮೀನುಗಾರಿಕೆ, ತೋಟಗಾರಿಕೆ, ಕೃಷಿ, ಜೈವಿಕ ತಂತ್ರಜ್ಞಾನ, ಪಶು ವೈದ್ಯಕೀಯ, ಪ್ರಾಣಿ ವಿಜ್ಞಾನ, ಆಹಾರ ತಂತ್ರಜ್ಞಾನ, ರೇಷ್ಮೆ ಕೃಷಿ, ಆಹಾರ ಪೋಷಣೆ ಮತ್ತು ಪದ್ಧತಿ, ಗೃಹ ಸಮುದಾಯ ವಿಜ್ಞಾನ, ಫಾರ್ಮಕ್ಕೆ ಸಂಬಂದಿಸಿದ ಕೋರ್ಸ್ ಗಳು,ಇತ್ಯಾದಿ. ಪ್ರತಿ ವರ್ಷ ರೂ.50,000 ದಿಂದ ಐದು ಲಕ್ಷದವರೆಗೆ ಸಾಲ ನೀಡಲಾಗುವುದು.
Arivu Education loan scheme ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅರಿವು ಶಿಕ್ಷಣ ಸಾಲ ಯೋಜನೆಯನ್ನು ಪ್ರಾರಂಭ ಮಾಡಿದ್ದು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಜಾರಿಗೋಳಿಸಿದೆ. ವೃತ್ತಿಪರ ಕೋರ್ಸ್ ಗಳನ್ನು ಮುಂದುವರೆಸಲು ಬಯಸುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು ಒದಗಿಸುವ ಮುಖ್ಯ ಗುರಿಯನ್ನು ಹೊಂದಿದೆ.
- ಇಲಾಖೆ ಹೆಸರು : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ.
- ನಿಗಮದ ಹೆಸರು : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ.
- ಉದ್ದೇಶ : ಶಿಕ್ಷಣ ಸಾಲ ನೀಡುವುದು.
- ಸೌಲಭ್ಯ : ಪ್ರತಿ ವರ್ಷ ರೂ.50,000 ದಿಂದ ಐದು ಲಕ್ಷದ ಸಾಲ.
- ಅವಧಿ ವರ್ಷಗಳು : ಕೋರ್ಸ್ ಮುಗಿಯುವ ವರೆಗೆ.
- ಸೌಲಭ್ಯ ನೀಡುವ ವೃತ್ತಿಪರ ಕೋರ್ಸ್ಗಳು :
- ಎಂ.ಬಿ.ಬಿ.ಎಸ್ (MBBS).
- ಎಂ.ಡಿ(MD).
- ಎಂ.ಎಸ್(MS).
- ಬಿಇ(BE).
- ಬಿ.ಟೆಕ್(B.Tech).
- ಎಂಇ(ME).
- ಎಂ.ಟೆಕ್(M.Tech).
- ಆಯುಷ್ ವೈದ್ಯಕೀಯ ಕೋರ್ಸ್(Ayush Course).
- ಎಂ.ಬಿ.ಎ(MBA).
- ಎಂ.ಡಿ.ಎಸ್(MDS).
- ಎಂ.ಸಿ.ಎ(MCA).
- ಕಾನೂನು ಪದವಿ(LLB).
- ಬಿ.ಎಸ್ಸಿ(B.Sc).
- ಮೀನುಗಾರಿಕೆ(Fish Farming).
- ತೋಟಗಾರಿಕೆ(Articulture).
- ಕೃಷಿ(Agriculture).
- ಜೈವಿಕ ತಂತ್ರಜ್ಞಾನ.
- ಪಶು ವೈದ್ಯಕೀಯ.
- ಪ್ರಾಣಿ ವಿಜ್ಞಾನ.
- ಆಹಾರ ತಂತ್ರಜ್ಞಾನ.
- ರೇಷ್ಮೆ ಕೃಷಿ.
- ಆಹಾರ ಪೋಷಣೆ ಮತ್ತು ಪದ್ಧತಿ.
- ಗೃಹ ಸಮುದಾಯ ವಿಜ್ಞಾನ.
- ಫಾರ್ಮಕ್ಕೆ ಸಂಬಂದಿಸಿದ ಕೋರ್ಸ್ ಗಳು.
ಶೈಕ್ಷಣಿಕ ಕ್ಷೇತ್ರಕ್ಕೆ ಮತ್ತು ಓದಲು ಆಸಕ್ತಿಯುಳ್ಳ ವಿದ್ಯಾರ್ಥಿಗಳ ಉನ್ನತ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಾಯ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
Arivu Education loan scheme ಸಾಲ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.
Arivu Education loan scheme : ವೃತ್ತಿಪರ ಕೋರ್ಸ್ ಗಳನ್ನು ಮುಂದುವರೆಸಲು ಬಯಸುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲವನ್ನು ಒದಗಿಸುವ ಮುಖ್ಯ ಗುರಿಯನ್ನು ಯೋಜನೆ ಹೊಂದಿದೆ. ಇದರ ಸೌಲಭ್ಯ ಪಡೆಯಲು ಬೇಕಾಗುವ ಪ್ರಮುಖ ದಾಖಲೆ ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
- ಹೊಸ ಶಿಕ್ಷಣ ಸಾಲಕ್ಕೆ ಬೇಕಾಗುವ ದಾಖಲೆಗಳು : (New Loan Application) :
- ಆಧಾರ್ ಕಾರ್ಡ್ (Aadhar Card).
- ವಿದ್ಯಾರ್ಥಿಯ ಜನನ ಪ್ರಮಾಣ ಪತ್ರ (Birth Certificate).
- ಆದಾಯ ದೃಡೀಕರಣ ಪತ್ರ (Income Certificate).
- ಜಾತಿ ಪ್ರಮಾಣ ಪತ್ರ (Caste Certificate).
- ಇತ್ತೀಚಿಗಿನ ಭಾವಚಿತ್ರಗಳು(Passport size Photos).
- ಎಸ್.ಎಸ್.ಎಲ್.ಸಿ ಅಂಕಪಟ್ಟಿ (SSLC Marks card).
- ಸಿಇಟಿ ಪ್ರವೇಶ ಪತ್ರ (CET Admit Card).
- ಪಿಯುಸಿ ಅಥವಾ ಡಿಪ್ಲೋಮ ಅಂಕಪಟ್ಟಿ.
- ಬ್ಯಾಂಕ್ ಖಾತೆಯ ವಿವರಗಳು(Bank Account Details).
- ಸ್ವಯಂ ಘೋಷಣೆ ಪತ್ರ (Self Declaration Form).
- ಕಾಲೇಜಿನ ವಿವರಗಳು.
- ಪೋಷಕರ ಸ್ವಯಂ ಘೋಷಣ ಪತ್ರ.
- ಕಾಲೇಜು ಶುಲ್ಕ ವಿವರಗಳು.
- ನವೀಕರಣ ಮಾಡಲು ಬೇಕಾಗುವ ದಾಖಲೆಗಳು : (Renewal Loan Application).
- ವಿದ್ಯಾಭ್ಯಾಸ ಪ್ರಮಾಣ ಪತ್ರ.
- ಕಾಲೇಜು ಶುಲ್ಕದ ವಿವರಗಳು.
- ಬ್ಯಾಂಕ್ ಖಾತೆಯ ದಾಖಲೆ.
- ಭದ್ರತಾ ಠೇವಣಿ ಪಾವತಿ ಮಾಡಿದ ರಶೀದಿ.
- ಹಿಂದಿನ ವರ್ಷದ ಅಂಕಪಟ್ಟಿ.
ಇವೆಲ್ಲಾ ದಾಖಲೆಗಳನ್ನು ಹೊಂದಿರುವ ಅರ್ಹ ವಿದ್ಯಾರ್ಥಿಗಳು ಅರಿವು ಸಾಲ ಯೋಜನೆ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಲು ಅರಿವು ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬಹುದು. ಅರಿವು ಯೋಜನೆಯ ಅಧಿಕೃತ ವೆಬ್ಸೈಟ್ ವಿಳಾಸಕ್ಕೆ ಇಲ್ಲಿ ಕ್ಲಿಕ್ ಮಾಡಿ.
Arivu Education loan scheme ಸಾಲ ಯೋಜನೆಗೆ ಬೇಕಾದ ಅರ್ಹತೆಗಳು.
Arivu Education loan scheme : ಅರಿವು ಸಾಲ ಯೋಜನೆ ಸೌಲಭ್ಯ ಪಡೆಯ ಬೇಕಾದರೆ ಕೆಲವು ಅರ್ಹತೆಗಳು ಇರಬೇಕು ಎಂದು ಸರ್ಕಾರ ತಿಳಿಸಿದೆ. ಯಾವ ಅರ್ಹತೆ ಬೇಕು ಎಂಬುದನ್ನು ನೋಡೋಣ.
- ವಿದ್ಯಾರ್ಥಿಯು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರಬೇಕು.
- ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
- ಕುಟುಂಬದ ವಾರ್ಷಿಕ ಆದಾಯ 8,00,000 ಒಳಗೆ ಇರಬೇಕು.
- ವೃತ್ತಿಪರ ಕೋರ್ಸ್ ಗೆ ಪ್ರವೇಶ ಪಡೆದಿರಬೇಕು.
ಇವೆಲ್ಲಾ ಅರ್ಹತೆ ಹೊಂದಿರುವ ವಿದ್ಯಾರ್ಥಿ ಅರಿವು ಸಾಲ ಯೋಜನೆಗೆ ಅರ್ಜಿ ಸಲ್ಲಿಸಿ, ಸೌಲಭ್ಯ ಪಡೆಯಲು ಅವಕಾಶ ಇರುತ್ತದೆ.
Arivu Education loan scheme ಅರಿವು ಸಾಲ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ.

ವೃತ್ತಿಪರ ಕೋರ್ಸ್ ಗಳನ್ನು ಮುಂದುವರೆಸಲು ಬಯಸುವ ವಿದ್ಯಾರ್ಥಿಗಳು ಅರಿವು ಶೈಕ್ಷಣಿಕ ಸಾಲ ಯೋಜನೆ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸುವ ವಿಧಾನವನ್ನು ತಿಳಿದುಕೊಳ್ಳೋಣ.
- ಮೊದಲು ಕರ್ನಾಟಕ ಅಲ್ಪಸಂಖ್ಯಾತ ನಿಗಮದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಮುಖಪುಟ ತೆರೆದ ನಂತರ “ಆನ್ಲೈನ್ ಅರ್ಜಿ” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
- ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು.
- ಆಮೇಲೆ ನಿಮ್ಮ ಆಧಾರ್ ನಂಬರ್ ಎಂಟ್ರಿ ಮಾಡಿ.
- ಮೊಬೈಲ್ ನಂಬರ್ ಗೆ ಬರುವ OTP ನಮೂದಿಸಿ.
- ಅಪ್ಲಿಕೇಶನ್ ತೆರೆದ ನಂತರ ನಿಮ್ಮ ವಯಕ್ತಿಕ ವಿವರವನ್ನು ಎಂಟ್ರಿ ಮಾಡಬೇಕು.
- ಆಮೇಲೆ ನಿಮ್ಮ ಪೋಷಕರ ವಿವರವನ್ನು ನಮೂದಿಸಿ.
- ನೆಕ್ಸ್ಟ್ ಶೈಕ್ಷಣಿಕ ವಿವರಗಳನ್ನು ನಮೂದಿಸಬೇಕು.
- ಕಾಲೇಜಿನ ಸಂಪೂರ್ಣ ಮಾಹಿತಿಯನ್ನು ನಮೂದಿಸಿ.
- ವಿದ್ಯಾರ್ಥಿಯ ಬ್ಯಾಂಕ್ ಖಾತೆ ಡೀಟೇಲ್ಸ್ ಎಂಟ್ರಿ ಮಾಡಿ.
- ಕೇಳಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
- ನೀಡಿರುವ ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
- ಎಲ್ಲಾ ಮಾಹಿತಿ ಸರಿಯಾಗಿ ಇದ್ದರೆ “ಅರ್ಜಿ ಸಲ್ಲಿಸು” ಎಂಬ ಲಿಂಕ್ ಕ್ಲಿಕ್ ಮಾಡಬೇಕು.
- ಅರ್ಜಿ ಸಲ್ಲಿಸಿದ ಮೇಲೆ ಅಪ್ಲಿಕೇಶನ್ ಅನ್ನು ಪ್ರಿಂಟ್ ಓಟ್ ತೆಗೆದುಕೊಳ್ಳಿ.
ಗಮನಿಸಿ, ನೀವು ನೀಡಿರುವ ಮೊಬೈಲ್ ನಂಬರ್ ಮತ್ತು ಆಧಾರ್ ನಂಬರ್ ಅನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅರಿವು ಯೋಜನೆ ಸೌಲಭ್ಯ ಪಡೆದುಕೊಂಡು ಶಿಕ್ಷಣವನ್ನು ಮುಂದುವರೆಸಿ.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.