PMFBY : ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಕೃಷಿ ಚಟುವಟಿಕೆಯನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ರೈತರ ಬೆಳೆಗೆ ಅಪಾಯದ ರಕ್ಷಣೆ ಒದಗಿಸುತ್ತದೆ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಕೃಷಿ ಬೆಳೆ ನಷ್ಟ ಮತ್ತು ಬೆಳೆ ಹಾನಿ ಸಂದರ್ಭದಲ್ಲಿ ಬೆಳೆ ವಿಮೆ ನೀಡುವ ಮೂಲಕ ರೈತರ ಆರ್ಥಿಕ ಸಂಕಷ್ಟವನ್ನು ದೂರ ಮಾಡುತ್ತದೆ. ಕೃಷಿ ಅಪಾಯವನ್ನು ನಿರ್ವಹಿಸಲು ಸಹಾಯ ಮಾಡಿ ರೈತರನ್ನು ಸ್ವಾವಲಂಬಿಗಳಾಗಿ ಇರಲು ಸಹಾಯವಾಗುತ್ತದೆ. ಪ್ರವಾಹ, ಬರಗಾಲ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಆಗುವ ನಷ್ಟಕ್ಕೆ ಪರಿಹಾರ ನೀಡುತ್ತದೆ. ತೋಟಗಾರಿಕೆ ಬೆಳೆಗಳು ಮತ್ತು ವಾಣಿಜ್ಯ ಬೆಳೆಗಳು ಹಾಗೂ ಆಹಾರ ಉತ್ಪಾದನೆ ಬೆಳೆಗಳು ಈ ವಿಮೆ ವ್ಯಾಪ್ತಿಯ ಒಳಗೆ ಬರುತ್ತದೆ. ಭಾರತ ಸರ್ಕಾರವು 2016 ರಲ್ಲಿ ಈ ಯೋಜನೆಯನ್ನು ರೈತರ ಅನುಕೂಲಕ್ಕಾಗಿ ಜಾರಿಗೆ ತಂದಿದೆ. ಕೃಷಿ ಬೆಳೆಗಳ ಸುರಕ್ಷತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಗುರಿಯಾಗಿದೆ. ಬೆಳೆ ವಿಮೆಯ ಸೌಲಭ್ಯ ರೈತರ ಕುಟುಂಬಗಳಿಗೆ ತಲುಪುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಲೇಖನದಲ್ಲಿ ನಾವು PMFBY ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ ಮತ್ತು ಬೇಕಾಗುವ ಪ್ರಮುಖ ದಾಖಲೆಗಳು, ಪ್ರಯೋಜನಗಳು, ಯಾರು ಈ ಯೋಜನಾ ಸೌಲಭ್ಯ ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
PMFBY : ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಕೃಷಿ ಬೆಳೆ ನಷ್ಟ ಮತ್ತು ಬೆಳೆ ಹಾನಿ ಸಂದರ್ಭದಲ್ಲಿ ಬೆಳೆ ವಿಮೆ ನೀಡುವ ಮೂಲಕ ರೈತರ ಆರ್ಥಿಕ ಸಂಕಷ್ಟವನ್ನು ದೂರ ಮಾಡುತ್ತದೆ. ಕೃಷಿ ಅಪಾಯವನ್ನು ನಿರ್ವಹಿಸಲು ಸಹಾಯ ಮಾಡಿ ರೈತರನ್ನು ಸ್ವಾವಲಂಬಿಗಳಾಗಿ ಇರಲು ಸಹಾಯವಾಗುತ್ತದೆ.ಈ ಯೋಜನಾ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.
- ಯೋಜನೆ ಹೆಸರು : ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ (PMFBY).
- ಜಾರಿಗೆ ಬಂದ ವರ್ಷ : 2016.
- ಉದ್ದೇಶ : ಬೆಳೆ ವಿಮೆ.
- ವಿಮೆಗೆ ಒಳಪಡುವ ಬೆಳೆಗಳು : ತೋಟಗಾರಿಕೆ ಬೆಳೆಗಳು.
- ವಾಣಿಜ್ಯ ಬೆಳೆಗಳು.
- ಆಹಾರ ಉತ್ಪಾದನೆ ಬೆಳೆಗಳು.
- ಸರ್ಕಾರ : ಭಾರತ ಸರ್ಕಾರ.
ಬೆಳೆ ವಿಮೆಯ ಸೌಲಭ್ಯ ರೈತರ ಕುಟುಂಬಗಳಿಗೆ ತಲುಪುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಬೆಳೆ ವಿಮೆ ಸವಾಲುಗಳನ್ನು ಪರಿಹರಿಸಲು ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಈ ಯೋಜನೆಯನ್ನು ಅಂಗಿಕರಿಸಲಾಯಿತು. ಯಶಶ್ವಿಯಾಗಿ 5 ವರ್ಷ ಪೂರೈಸಿದ ಕೀರ್ತಿ ಈ ಯೋಜನೆಗೆ ಸಲ್ಲುತ್ತದೆ. ಬೆಳೆ ನಷ್ಟಕ್ಕೆ ಅನುಗುಣವಾಗಿ ರೈತರಿಗೆ ಬೆಳೆ ಹಾನಿ ಪರಿಹಾರ ಒದಗಿಸಲಾಗುವುದು.
Important Massages : ಪ್ರತಿ ದಿನ ಟ್ರೆಂಡಿಂಗ್ ನ್ಯೂಸ್ ಮತ್ತು ಸರ್ಕಾರಿ ಯೋಜನೆಗಳು ಹಾಗೂ ಹೊಸ ಉದ್ಯೋಗ ಮತ್ತು ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಪಡೆಯಲು ದಯವಿಟ್ಟು ನಮ್ಮ “Tharak7star Whatsapp Group Join Now” ವಾಟ್ಸಾಪ್ ಗ್ರೂಪ್ ಗೆ ಜಾಯಿನ್ ಆಗಿ.
PMFBY : ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಉದ್ದೇಶಗಳು.
ಕೃಷಿ ಬೆಳೆಗಳ ಸುರಕ್ಷತೆಯನ್ನು ಹೆಚ್ಚಿಸುವುದು ಇದರ ಮುಖ್ಯ ಗುರಿಯಾಗಿದೆ.
- ರೈತರನ್ನು ಸ್ವಾವಲಂಬಿಗಳಾಗಿ ಮಾಡುವುದು.
- ಕೃಷಿ ಆದಾಯವನ್ನು ಸುಸ್ತಿರಗೊಳಿಸುವುದು.
- ಹಾನಿಗೆ ಒಳಪಟ್ಟ ಬೆಲೆಯನ್ನು ವೇಗವಾಗಿ ಗುರುತಿಸಿ ಪರಿಹಾರ ನೀಡುವುದು.
- ಬೆಳೆ ನಷ್ಟ ಮತ್ತು ಹಾನಿಯಿಂದ ತೊಂದರೆಗೆ ಒಳಪಟ್ಟ ರೈತರಿಗೆ ಆರ್ಥಿಕ ನೆರವು ನೀಡುವುದು.
- ಕೃಷಿ ಚಟುವಟಿಕೆ ಅಭಿವೃದ್ಧಿ ಪಡಿಸಲು ಹಣಕಾಸಿನ ಸಹಾಯ ಮಾಡುವುದು.
- ಹೊಸ ತಂತ್ರಜ್ಞಾನ ಬಳಸಲು ಉಟ್ಟೇಜಿಸುವುದು. ಆಧುನಿಕ ಉಪಕರಣ ಬಳಸಲು ನೆರವು ನೀಡುವುದು.
- ರೈತರನ್ನು ಉತ್ಪಾದನ ಅಪಾಯದಿಂದ ರಕ್ಷಿಸುವುದು.
- ಕೃಷಿ ಬೆಳೆಗಳಿಗೆ ಸ್ಪರ್ಧಾತ್ಮಕತೆ ಹೆಚ್ಚಿಸುವುದು.
- ರೈತರ ಆದಾಯವನ್ನು ಸ್ಥಿರಗೊಳಿಸುವುದು.
- ನವೀನ ಕೃಷಿಗೆ ಆದ್ಯತೆ ನೀಡುವುದು.
ಒಟ್ಟಿನಲ್ಲಿ ಕೃಷಿ ಕ್ಷೇತ್ರದಲ್ಲಿ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿ ಆಗುವಂತೆ ಸಹಕಾರ ನೀಡುವ ಮುಖ್ಯ ಉದ್ದೇಶ ಹೊಂದಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು ಪಿಎಂ FBY ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ. PMFBY ವೆಬ್ಸೈಟ್ ಗೆ ಇಲ್ಲಿ ಕ್ಲಿಕ್ ಮಾಡಿ.
PMFBY : ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಒಳಪಡುವ ವಿಕೋಪಗಳು.
PMFBY ಒಂದು ವಿಮಾ ಯೋಜನೆಯಾಗಿದೆ. ನಮ್ಮ ದೇಶದಲ್ಲಿ ರೈತರು ಅನುಭವಿಸುವ ಕಷ್ಟಗಳನ್ನು ದೂರ ಮಾಡುವ ಮಹತ್ವದ ಉದ್ದೇಶ ಹೊಂದಿದೆ.
- ನೈಸರ್ಗಿಕ ವಿಕೋಪಗಳು : ರೈತರು ಬೆಳೆದ ಬೆಳೆ ನೈಸರ್ಗಿಕ ವಿಕೋಪಕ್ಕೆ ತುತ್ತಾದರೆ, ರೈತರು ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತದೆ. ಭೂ ಕುಸಿತ ಮತ್ತು ಅತಿಯಾದ ಮಳೆ ಬರುವುದರಿಂದ ಬೆಳೆ ನಾಶ ಆಗುತ್ತದೆ. ಇದಕ್ಕೆ ಪರಿಹಾರ ನೀಡುವುದು ಈ ಯೋಜನೆಯ ಗುರಿಯಾಗಿದೆ.
- ಪ್ರವಾಹ ಪರಿಹಾರ : ಅತಿಯಾದ ಮಳೆಯಿಂದ ಪ್ರವಾಹ ಉಂಟಾದರೆ ಬೆಳೆ ನಷ್ಟ ಆಗುತ್ತದೆ. ಬೆಳೆಗಳಿಗೆ ನಿರು ನುಗ್ಗಿ, ಬೆಳೆ ಕೊಳೆತು ನಷ್ಟವಾಗುತ್ತದೆ. ಆಗ PMFBY ವಿಮೆ ಪರಿಹಾರ ನೀಡುತ್ತದೆ.
- ಬರಗಾಲ : ಮಳೆ ಇಲ್ಲದೆ ಬರಗಾಲ ಉಂಟಾದ ಸಂದರ್ಭದಲ್ಲಿ ಬೆಳೆ ನಷ್ಟಕ್ಕೆ ಆರ್ಥಿಕ ಸಹಾಯ ನೀಡುವುದು ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಕರ್ತವ್ಯವಾಗಿದೆ.
- ಚಂಡಮಾರುತ : ಚಂಡಮಾರುತ ಉಂಟಾಗಿ ಬೆಳೆ ಹಾನಿ ಆದರೇ ಪರಿಹಾರ ನೀಡಲಾಗುವುದು.
- ಕಾಡು ಪ್ರಾಣಿಗಳು : ರೈತ ಬೆಳೆದ ಬೆಲೆಯನ್ನು ಕಾಡು ಪ್ರಾಣಿಗಳು ಬಂದು ತಿಂದು ಹಾಳು ಮಾಡಿದ ಸಂದರ್ಭದಲ್ಲಿ ವಿಮೆ ಪರಿಹಾರ ಸಿಗುತ್ತದೆ.
- ಪರಮಾಣು ಅಪಾಯಕಾರಿ ಮಾಲಿನ್ಯ : ಕೈಗಾರಿಕೆಗಳಿಂದ ಅಥವಾ ಪರಮಾಣು ಮಾಲಿನ್ಯ ಉಂಟಾದ ಸಮಯದಲ್ಲಿ ಬೆಳೆ ಹಾನಿಯದ ಬೆಳೆಗೆ ಹಣಕಾಸಿನ ಸೌಲಭ್ಯ ನೀಡುತ್ತದೆ.
ಯಾವುದೇ ರೀತಿಯಲ್ಲಿ ಬೆಳೆ ಹಾನಿ ಉಂಟಾದರೆ ಪರಿಹಾರ ನೀಡಲು ಪ್ರಧಾನಮಂತ್ರಿ ಪಸಲ್ ಭೀಮ ಯೋಜನೆ ಇರುತ್ತದೆ.
How do I check my PMFBY Beneficiary list.
ಕೃಷಿ ಅಪಾಯವನ್ನು ನಿರ್ವಹಿಸಲು ಸಹಾಯ ಮಾಡಿ ರೈತರನ್ನು ಸ್ವಾವಲಂಬಿಗಳಾಗಿ ಇರಲು ಸಹಾಯವಾಗುತ್ತದೆ. ಪ್ರವಾಹ, ಬರಗಾಲ, ಪ್ರಕೃತಿ ವಿಕೋಪ ಸಂದರ್ಭದಲ್ಲಿ ಆಗುವ ನಷ್ಟಕ್ಕೆ ಪರಿಹಾರ ನೀಡುತ್ತದೆ. ತೋಟಗಾರಿಕೆ ಬೆಳೆಗಳು ಮತ್ತು ವಾಣಿಜ್ಯ ಬೆಳೆಗಳು ಹಾಗೂ ಆಹಾರ ಉತ್ಪಾದನೆ ಬೆಳೆಗಳು ಈ ವಿಮೆ ವ್ಯಾಪ್ತಿಯ ಒಳಗೆ ಬರುತ್ತದೆ.
PMFBY ಪರಿಶೀಲನೆ ಮಾಡುವುದು ಹೇಗೆ.
- ಮೊದಲಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
- ಅಲ್ಲಿ ಫಾರ್ಮರ್ ವಿಭಾಗಕ್ಕೆ ಹೋಗಬೇಕು.
- ನಂತರ ನೀವು ಈಗಾಗಲೇ ನೋಂದಣಿ ಮಾಡಿದವರಗಿದ್ದರೆ ಲಾಗಿನ್ ಮಾಡಿಕೊಳ್ಳಬೇಕು.
- ಲಾಗಿನ್ ಮಾಡಲು ನಿಮ್ಮ ಮೊಬೈಲ್ ನಂಬರ್ ಹಾಕಿ. OTP ಹಾಕಬೇಕು.
- ಅಪ್ಲಿಕೇಶನ್ ತೆರೆದ ನಂತರ ನಿಮ್ಮ ಜಿಲ್ಲೆ, ತಾಲೂಕು ನಮೂದಿಸಿ.
- ಹಾಗೆ ಗ್ರಾಮ, ಹಳ್ಳಿ ಆಯ್ಕೆ ಮಾಡಬೇಕು.
- ಬೆಳೆಯ ವರ್ಷ, ಋತು ಆಯ್ಕೆ ಮಾಡಿ.
- ನಂತರ ಫಲಾನುಭವಿಗಳ ಪಟ್ಟಿ ತೆರೆದುಕೊಳ್ಳುತ್ತದೆ.
- ಹೀಗೆ ನಿಮ್ಮ ಮಾಹಿತಿಯನ್ನು ಪಡೆಯಬಹುದು.
PMFBY : ಪ್ರಧಾನಮಂತ್ರಿ ಫಸಲ್ ಭೀಮ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಕೃಷಿ ಬೆಳೆ ನಷ್ಟ ಮತ್ತು ಬೆಳೆ ಹಾನಿ ಸಂದರ್ಭದಲ್ಲಿ ಬೆಳೆ ವಿಮೆ ಪಡೆಯಲು ಮೊದಲು ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಹೀಗಿವೆ.
- ಆಧಾರ್ ಕಾರ್ಡ್(Aadhar Card).
- ಚುನಾವಣಾ ಗುರುತಿನ ಚೀಟಿ (Election Identity Card).
- ಭಾವಚಿತ್ರಗಳು (Photos).
- ಬ್ಯಾಂಕ್ ಖಾತೆಯ ವಿವರ (Bank Account Details).
- ಭೂಮಿಯ RTC ಪತ್ರ.
- ಬೆಳೆಯ ವಿವರ.
ಇವೆಲ್ಲಾ ದಾಖಲೆ ಹೊಂದಿರುವ ರೈತರು ಅರ್ಜಿ ಸಲ್ಲಿಸಿ. ಬೆಳೆ ಪರಿಹಾರ ಪಡೆಯಲು ಅವಕಾಶ ಇರುತ್ತದೆ.
PMFBY ಅರ್ಜಿ ಸಲ್ಲಿಸುವ ವಿಧಾನ.
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಕೃಷಿ ಬೆಳೆ ನಷ್ಟ ಮತ್ತು ಬೆಳೆ ಹಾನಿ ಸಂದರ್ಭದಲ್ಲಿ ಬೆಳೆ ವಿಮೆ ಪಡೆಯಲು ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಬೇಕು.
- ಮುಖಪುಟ ತೆರೆದ ನಂತರ ರೈತ ಲಾಗಿನ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ಅಪ್ಲಿಕೇಶನ್ ಓಪನ್ ಆದಮೇಲೆ ನಿಮ್ಮ ಮೊಬೈಲ್ ನಂಬರ್ ಹಾಕಿ.
- ಮೊಬೈಲ್ ನಂಬರ್ ಗೆ OTP ಬರುತ್ತದೆ, ಅದನ್ನು ಎಂಟ್ರಿ ಮಾಡಿ.
- ನಂತರ ಕ್ಯಾಪ್ಶರ್ ಕೋಡ್ ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಬೇಕು.
- ಆಮೇಲೆ ಲಾಗಿನ್ ಮಾಡಬೇಕು. ಆಗ ಅಪ್ಲಿಕೇಶನ್ ಓಪನ್ ಆಗುತ್ತದೆ.
- ಅಪ್ಲಿಕೇಶನ್ ನಲ್ಲಿ ಕೇಳಲಾದ ನಿಮ್ಮ ವಯಕ್ತಿಕ ವಿವರಗಳನ್ನು ನಮೂದಿಸಿ.
- ನಂತರ ನಿಮ್ಮ ಬ್ಯಾಂಕ್ ಖಾತೆಯ ಸಂಪೂರ್ಣ ಮಾಹಿತಿಯನ್ನು ಒದಗಿಸಿ.
- ನೀಡಿರುವ ಎಲ್ಲಾ ಮಾಹಿತಿ ಸರಿಯಾಗಿ ಇದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಿ.
- ಆಮೇಲೆ ಅರ್ಜಿಯನ್ನು submit ಮಾಡಬೇಕು.
- ಅರ್ಜಿ ಸಲ್ಲಿಸಿದ ಮೇಲೆ ಅರ್ಜಿಯನ್ನು ಪ್ರಿಂಟ್ ಓಟ್ ತೆಗೆದುಕೊಳ್ಳಿ.
ಹೀಗೆ ಅರ್ಜಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳು ಆಯ್ಕೆಯಾದ ನಂತರ ಬೆಳೆ ಪರಿಹಾರ ನೀಡಲಾಗುವುದು.
ವಿಶೇಷ ಸೂಚನೆ : “Tharak7starnews15.com” ವೆಬ್ಸೈಟ್ ನಲ್ಲಿ ಯಾವುದೇ ರೀತಿಯ ಸುಳ್ಳು ಮಾಹಿತಿಯನ್ನು ಪ್ರಕಟಿಸುವುದಿಲ್ಲ. ಅಧಿಕೃತ, ಉಪಯುಕ್ತ ಮಾಹಿತಿಯನ್ನು ಮಾತ್ರ ಪ್ರಕಟಿಸಲಾಗುವುದು. ವಂದನೆಗಳು.